






ಕಡಬ: ಮನೆಯ ಗೋದ್ರೆಜ್ನಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಕಲ್ಲು ಗ್ರಾಮ ಮತ್ತು ಅಂಚೆ,ಕಡಬ ತಾಲೂಕುನಲ್ಲಿ ನಡೆದಿದೆ.
ಕಡಬ ತಾಲೂಕು, ಏನೆಕಲ್ಲು ಗ್ರಾಮದ ನಿವಾಸಿ ಹರೀಶ್ ಪಿ ಎಂಬವರ ದೂರಿನಂತೆ ಅವರ ಪತ್ನಿ ವೇದಾವತಿಯವರು ಕಳೆದ ಜೂನ್ 6ರಂದು ಮದ್ಯಾಹ್ನ ವೇಳೆ ಅವರ 84 ಗ್ರಾಂ ಚಿನ್ನಾಭರಣಗಳನ್ನು ಶುಚಿಗೊಳಿಸಿ ಮನೆಯೊಳಗಿನ ಗೋದ್ರೆಜ್ನ ಲಾಕರ್ನಲ್ಲಿರಿಸಿದ್ದರು. ಸೆ.17 ರಂದು ಸಾಯಂಕಾಲ ಅವರು ಗೋದ್ರೆಜ್ನ್ನು ತೆರೆದು ನೋಡಿದಾಗ ಗೋದ್ರೆಜ್ ಲಾಕರ್ನಲ್ಲಿಇರಿಸಿದ್ದ ಚಿನ್ನಾಭರಣಗಳನ್ನು ನೋಡಿದಾಗ ಆ ಚಿನ್ನಾಭರಣಗಳು ಕಾಣೆಯಾಗಿದ್ದು, ಚಿನ್ನಾಭರಣಗಳ ಮೌಲ್ಯ 5,00,000/- ಎಂದು ಅಂದಾಜಿಸಲಾಗಿದೆ.
ಜೂನ್ 6ರಿಂದ ಸೆ.17ರ ನಡುವಿನ ಅವಧಿಯಲ್ಲಿ ಕಳ್ಳರು ಮನೆಗೆ ನುಗ್ಗಿ ಮನೆಯ ಒಳಗಿನ ಗೋದ್ರೆಜ್ ಲಾಕರ್ನಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ: 45/2024 ಕಲಂ:305BNS ರಂತೆ ಪ್ರಕರಣ ದಾಖಲಾಗಿರುತ್ತದೆ.