Saturday, June 28, 2025
spot_imgspot_img
spot_imgspot_img

ಕೆಟ್ಟು ನಿಂತಿದ್ದ ವಾಹನ ದುರಸ್ತಿ ವೇಳೆ ಟ್ಯಾಂಕರ್ ಡಿಕ್ಕಿ; ಮೂವರು ಮೃತ್ಯು

- Advertisement -
- Advertisement -

ಕೆಟ್ಟು ನಿಂತಿದ್ದ ವಾಹನ ದುರಸ್ತಿ ವೇಳೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವಂತಹ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇವಣಿ ಗ್ರಾಮದ ಬಳಿ ನಡೆದಿದೆ.

ಹೈದರಾಬಾದ್, ಬೀದರ್ ಮೂಲದ ಪ್ರಶಾಂತ್, ವಿಠ್ಠಲ್, ಮಂಗ್ಲಿ ಮೃತರು. ಕಲಬುರಗಿಯಿಂದ ಸೇಡಂ ಮಾರ್ಗವಾಗಿ ಹೈದರಾಬಾದ್​ಗೆ ತೆರಳುತ್ತಿದ್ದು, ಇವಣಿ ಗ್ರಾಮದ ಬಳಿ ವಾಹನ ಕೆಟ್ಟು ನಿಂತಿದ್ದರಿಂದ ರಸ್ತೆ ಬದಿ ನಿಲ್ಲಿಸಿ ದುರಸ್ತಿ ಮಾಡಲಾಗುತ್ತಿದ್ದು, ಈ ವೇಳೆ ಹಿಂದಿನಿಂದ ಬಂದ ಸಿಮೆಂಟ್ ಟ್ಯಾಂಕರ್ ಹರಿದು ಮೂವರು ಮೃತಪಟ್ಟಿದ್ದಾರೆ. ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!