ಭೂಮಿ ಪೂಜನ ವಿಶೇಷ ಕಾರ್ಯಕ್ರಮ-ಪತ್ರಿಕಾಗೋಷ್ಠಿ









ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಂಬಳಬೆಟ್ಟು, ಆಶ್ರಯದಲ್ಲಿ 53 ನೇ ವರ್ಷದ ಮಹಾಗಣೇಶೋತ್ಸವವು ಇದೇ ಸೆ. 7, 8, 9 ರಂದು ಕಂಬಳಬೆಟ್ಟು ಧರ್ಮನಗರದ ಸಮಾಜ ಮಂದಿರದಲ್ಲಿ ನಡೆಯುವ ಮಹಾಗಣೇಶೋತ್ಸವದ ಬಗ್ಗೆ ವಿಟ್ಲ ಪಂಚಮಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.


ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯೊಂದಿಗೆ, ಕಳೆದ 52 ವರ್ಷಗಳಿಂದ ಕಂಬಳಬೆಟ್ಟು ಧರ್ಮ ನಗರದ ಸಮಾಜ ಮಂದಿರದಲ್ಲಿ ಶ್ರೀ ಮಹಾ ಗಣೇಶೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಹಲವು ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುವ ಈ ಬಾರಿಯ 53 ನೇ ವರ್ಷದ ಮಹಾಗಣೇಶೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಗಣೇಶೋತ್ಸವ ಎರಡನೇ ದಿನ ಅಂದರೆ ಸೆ. 8 ರಂದು ಸಂಜೆ 7:00ಗೆ ಭೂಮಿ ಪೂಜನ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್ 21 ರಿಂದ 25 ರವರೆಗೆ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೆ. 8 ರಂದು ರಾತ್ರಿ ಮಹಾಗಣೇಶೋತ್ಸವದ ಕಾರ್ಯಕ್ರಮದಲ್ಲಿ ನಡೆಯಲಿದೆ.
ನಮ್ಮ ಪರಿಸರವನ್ನ ಉಳಿಸಿ ಬೆಳೆಸಿ ಈ ಮಣ್ಣನ್ನು ಸಂರಕ್ಷಿಸುವುವ ನಿಟ್ಟಿನಲ್ಲಿ ನಮ್ಮ ಗಣೇಶೋತ್ಸವದಲ್ಲಿ ನಾವು ವಾಸಿಸುವ ಪರಿಸರದಿಂದ ಎಲ್ಲಾ ಮನೆಯವರು ಐದು ಮುಷ್ಟಿ ಮಣ್ಣನ್ನ ತರಬೇಕು. ಅದನ್ನು ಪೂಜಿಸಿದ ನಂತರ ಪ್ರಸಾದ ರೂಪವಾಗಿ ಮತ್ತೆ ಒಂದು ಮುಷ್ಟಿ ಮಣ್ಣನ್ನು ಕೊಂಡು ಹೋಗಿ ನಮ್ಮ ನಮ್ಮ ಪರಿಸರದಲ್ಲಿ ನಮ್ಮ ಮಣ್ಣಿನೊಂದಿಗೆ ಸೇರಿಸಿ ಈ ಮೂಲಕ ನಮಗೆ ಈ ಭೂಮಿಯಲ್ಲಿ ಬದುಕಲು ಅವಕಾಶ ಮಾಡಿಕೊಟ್ಟ ಭೂಮಿತಾಯಿಗೆ ನಮನ ಸಲ್ಲಿಸುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಭೂಮಿ ಪೂಜನದ ಸಂದರ್ಭದಲ್ಲಿ ರಂಗ ಪೂಜೆಯು ನಡೆದು ಎಲ್ಲರೂ ಸಾಮೂಹಿಕವಾಗಿ ಆರತಿಯನ್ನ ಬೆಳಗುವುದಕ್ಕೆ ಇದೆ. ಎಲ್ಲರೂ ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮೇಶ ಧರ್ಮನಗರ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಧನರಾಜ ಅಮೈ ಉಪಸ್ಥಿತರಿದ್ದರು.