Monday, June 30, 2025
spot_imgspot_img
spot_imgspot_img

ಕಂಬಳಬೆಟ್ಟು: ಶ್ರೀ ವೈದ್ಯನಾಥ ಮಲರಾಯ ಮತ್ತು ಸಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವದ ಪೂರ್ವತಯಾರಿಯ ಮಹಾಸಭೆ

- Advertisement -
- Advertisement -

ಕಂಬಳಬೆಟ್ಟು: ಇಡ್ಕಿದು, ಕುಳ, ವಿಟ್ಲಮೂಡ್ನರು ಮೂರು ಗ್ರಾಮಗಳ ಸಂಗಮ ಕ್ಷೇತ್ರ ಶ್ರೀ ವೈದ್ಯನಾಥ ಮಲರಾಯ ಮತ್ತು ಸಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ದಿನಾಂಕ: 21-12-2024 ರಿಂದ 25-12-2024 ರ ವರೆಗೆ ಜರಗಲಿರುವುದು. ಬ್ರಹ್ಮಕಲಶದ ಪೂರ್ವತಯಾರಿಯ ಬಗ್ಗೆ ಧರ್ಮನಗರದ ಸಮಾಜ ಮಂದಿರದಲ್ಲಿ ಮಹಾಸಭೆ ನಡೆಯಿತು

ಬ್ರಹ್ಮಕಲಶದ ವ್ಯವಸ್ಥೆಗಾಗಿ ಬೇರೆ ಬೇರೆ ಸಮಿತಿಗಳನ್ನು ರಚಿಸಲಾಯಿತು. ಬ್ರಹ್ಮಕಲಶದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ವಸಂತ ಕುಮಾರ್ ಅಮೈ ಉಪಾಧ್ಯಕ್ಷರಾಗಿ ಸುಧಾಕರ ಶೆಟ್ಟಿ ಬೀಡಿನಮಜಲು ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಭಟ್ ks ಉರಿಮಜಲು ಇವರುಗಳನ್ನು ಸಭೆಯಲ್ಲಿ ಸರ್ವನೂ ಮತಗಳಿಂದ ಆಯ್ಕೆ ಮಾಡಲಾಯಿತು.

ಬ್ರಹ್ಮಕಲಶ ಮತ್ತು ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರಾಗಿ ನೂಜಿ KT ವೆಂಕಟೇಶ್ವರ ಭಟ್ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ಮೂಡೈಮಾರ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ಶೆಟ್ಟಿ ಮೂಡೈಮಾರ್ ಸಂಘಟನಾ ಕಾರ್ಯದರ್ಶಿಯಾಗಿ ಮಹಾಬಲ ಆಚಾರ್ಯ ಕಾರ್ಯಾಡಿ ಕೋಶಾಧಿಕಾರಿಯಾಗಿ ಸುರೇಂದ್ರ ಕಾರ್ಯಾಡಿ ಇವರುಗಳನ್ನು ಮುಂದುವರಿಸಲಾಯಿತು.

ಸಮಿತಿಯ ಸದಸ್ಯ ಜೈದೀಪ್ ಅಮೈ ಸ್ವಾಗತಿಸಿ, ರಾಘವ ಮಂಜಪಾಲು ಧನ್ಯವಾದಗೈದರು. ರಾಜೇಶ್ ಕೋಡಿಜಾಲು ನಿರೂಪಿಸಿದರು. ನೂರರೂ ಮಂದಿ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.

- Advertisement -

Related news

error: Content is protected !!