




ಕಂಬಳಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇದರ 53ನೇ ವರ್ಷದ ಮಹಾಗಣೇಶೋತ್ಸವವು ಸೆ. 07ನೇ ಶನಿವಾರದಿಂದ ಸೆ. 09ನೇ ಸೋಮವಾರದ ವರೆಗೆ ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯಲಿದೆ.
ದಿನಾಂಕ : 07-09-202ನೇ ಶನಿವಾರ ಪೂರ್ವಾಹ್ನ ಘಂಟೆ 8:30ಕ್ಕೆ ಶ್ರೀ ಗಣಪತಿ ಹವನ ನಡೆದು ಬಳಿಕ ಪೂರ್ವಾಹ್ನ ಘಂಟೆ 9:30ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠೆ ಹಾಗೂ ಉತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮ ಧ್ವಜಾರೋಹಣವನ್ನು ವಕೀಲರು, ಅಧ್ಯಕ್ಷರರು, ವಿ.ಹೆಚ್.ಪಿ. ಬಂಟ್ವಾಳ ಪ್ರಖಂಡ ಪ್ರಸಾದ್ ಕುಮಾರ್ ನೆರವೇರಿಸಲಿದ್ದಾರೆ. ತಿಮ್ಮಪ್ಪ ಕೋಟೆಕೆರೆ, ವಿಟ್ಲ ಉದ್ಘಾಟಿಸಲಿದ್ದಾರೆ. ನೂಜಿ ಪುರೋಹಿತ ವೇ| ಮೂ| ಗೋಪಾಲಕೃಷ್ಣ ಭಟ್ಟ್ ಮಿತ್ತೂರು ಮೂರ್ತಿಪ್ರತಿಷ್ಠೆ ಮಾಡಲಿದ್ದಾರೆ.
ಪೂರ್ವಾಹ್ನ 11:00ಕ್ಕೆ ಪೂಜಾ ಸೇವೆ ನಡೆದು, ಮಧ್ಯಾಹ್ನ 12:30ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6:00ರಿಂದ ಧರ್ಮನಗರ ಬಾಲಗೋಕುಲ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ 7:00ರಿಂದ ರಾಮಾಯಣದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆದು ಬಳಿಕ ರಾತ್ರಿ 8:20ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ ನಡೆದು , ರಾತ್ರಿ 8:30ಕ್ಕೆ ನೃತ್ಯೋಪಾಸನಾ ಕಲಾ ಅಕಾಡೆಮಿ ( ರಿ. ) ಪುತ್ತೂರು ಇವರು ಪ್ರಸ್ತುತ ಪಡಿಸುವ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಇವರ ನೃತ್ಯ ನಿರ್ದೇಶನದಲ್ಲಿ ನೃತ್ಯೋಹಂ ಕಾರ್ಯಕ್ರಮವು ನಡೆಯಲಿದೆ.
ದಿನಾಂಕ 08-09-2024ನೇ ಭಾನುವಾರ ಬೆಳಿಗ್ಗೆ 10:00 ರಿಂದ ಸಾರ್ವಜನಿಕ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ. ಮಧ್ಯಾಹ್ನ 11:00ಕ್ಕೆ ಮಹಿಳಾ ಭಜನಾ ಸಮಿತಿ ಧರ್ಮನಗರ ಇವರಿಂದ ಭಜನಾ ಕಾರ್ಯಕ್ರಮ ನಡೆದು ಬಳಿಕ ಮಧ್ಯಾಹ್ನ 12:30ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಸಂಜೆ ಘಂಟೆ 4:00ಕ್ಕೆ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ವಿಷ್ಣುನಗರ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 6:00ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ಸಂಜೆ 7:00ಕ್ಕೆ ಭೂಮಿ ಪೂಜನಾ ಕಾರ್ಯಕ್ರಮ ನಡೆದು ಬಳಿಕ ರಾತ್ರಿ ಘಂಟೆ 8:00ಕ್ಕೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8:30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಯೋಜಕರು, ಗ್ರಾಮ ವಿಕಾಸ ಮಂಗಳೂರು ವಿಭಾಗ ಜೀತೇಂದ್ರ ಪ್ರಾತಾನಗರ ಭೂಮಿ ಪೂಜಾನಾದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ದಿನಾಂಕ 09-09-2024ನೇ ಸೋಮವಾರ ಪೂರ್ವಾಹ್ನ 9:00ಕ್ಕೆ ಪೂಜಾ ಸೇವೆ ನಡೆಯಲಿದೆ. ಪೂರ್ವಾಹ್ನ 9:00ಕ್ಕೆ 45 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಪೂರ್ವಾಹ್ನ ಘಂಟೆ 10:00ಕ್ಕೆ ಮಹಿಳೆಯರಿಗೆ ರಂಗವಲ್ಲಿ ಸ್ಪರ್ಧೆ, ಹೂಹಾರ ಸ್ಪರ್ಧೆ ನಡೆದು ಬಳಿಕ ಅಪರಾಹ್ನ 12:30ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಅಪರಾಹ್ನ 2:00ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷರು ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಸುಧಾಕರ್ ಶೆಟ್ಟಿ ಬೀಡಿನಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಚಾಲಕರು, ಸಾಮರಸ್ಯ ವೇದಿಕೆ ಮಂಗಳೂರು ವಿಭಾಗ ಶಿವಪ್ರಸಾದ್ ಮಲೆಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅಪರಾಹ್ನ ಘಂಟೆ 3:00ಕ್ಕೆ ಮಹಾಮಂಗಳಾರತಿ, ದಿಗ್ವಿಜಯೋತ್ಸವ, ವಂದೇ ಮಾತರಂ, ಮೂರ್ತಿ ಜಲಸ್ಥಂಭನ ನಡೆಯಲಿದೆ. ಏಕದಂತ ನೃತ್ಯ ಭಜನಾ ತಂಡ ಪೆರ್ಲ ಮತ್ತು ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ವಿಷ್ಣುನಗರ- ಕುಂಡಡ್ಕ ಇವರಿಂದ ಕುಣಿತ ಭಜನೆ ನಡೆಯಲಿದೆ. ರಾತ್ರಿ 7:30 ರಿಂದ ದೇವಿ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾತ್ರಿ 8:00ಕ್ಕೆ ದಿನೇಶ್ ಕೋಡಪದವು ಸಾರಥ್ಯದಲ್ಲಿ ಯಕ್ಷತೆಲಿಕೆ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 7-09-2024ನೇ ಶನಿವಾರದಂದು ನಡೆಯುವ ಆಟೋಟ ಸ್ಪರ್ಧೆಗಳ ವಿವರ ;
ಐದು ವರ್ಷದೊಳಗಿನ ಮಕ್ಕಳಿಗೆ ಸ್ಥಳದಲ್ಲಿಯೇ ಸೂಕ್ತ ಸ್ಪರ್ಧೆ ನಡೆಸಲಾಗುವುದು.
1 ರಿಂದ 2ನೇ ತರಗತಿ ಬಾಲಕ – ಬಾಲಕಿಯರಿಗೆ
- ಬಾಟಲಿ ಬೀಳಿಸುವುದು, * ಲೋಟ ಸಮತೋಲನ, * ನಕ್ಷತ್ರಗಳ ಹೆಸರು ಹೇಳುವುದು.
3 ರಿಂದ 4ನೇ ತರಗತಿ ಬಾಲಕ – ಬಾಲಕಿಯರಿಗೆ - ನಕ್ಷತ್ರಗಳ ಹೆಸರು ಬರೆಯುವುದು, * ತಟ್ಟೆ ಸಮತೋಲನ, *ಒಂದು ಕಾಲಿನ ಓಟ.
5 ರಿಂದ 7ನೇ ತರಗತಿ ಬಾಲಕ – ಬಾಲಕಿಯರಿಗೆ
*ಅಗ್ನಿದಂಡ, *ಭಗವದ್ಗೀತೆ ಕಂಠಪಾಠ ( 12ನೇ ಅಧ್ಯಾಯ ), *ಎಲೆಗಳ ವಿಂಗಡಣೆ.
8 ರಿಂದ 10ನೇ ತರಗತಿ ಬಾಲಕ – ಬಾಲಕಿಯರಿಗೆ - ಬಲೂನು ಒಡೆಯುವುದು, * ಗೋಪುರ ಕೆಡವುದು, * ದಂಡನಡಿಗೆ, *ಭಗವದ್ಗೀತೆ ಕಂಠಪಾಠ ( 12ನೇ ಅಧ್ಯಾಯ )
ಯುವತಿಯರಿಗೆ : - ದೋಸೆ ಕಾವಲಿ, * ಬಲೂನ್ನಿಂದ ಗ್ಲಾಸ್ ಎತ್ತುವುದು, * ಬಾಟಲಿ ಸಮತೋಲನ , * ಬೆಲೂನ್ ಎಸೆತ ಬಾಲ್ ಜಿಗಿತ , * ಸಂಗೀತ ಕುರ್ಚಿ.
ಮಾತೆಯರಿಗೆ : - ಸಂಗೀತ ಕುರ್ಚಿ, * ದೋಸೆ ಕಾವಲಿ, * ಬೆಲೂನ್ ಎಸೆತ ಬಾಲ್ ಜಿಗಿತ.
ಹಿರಿಯ ಮಾತೆಯರಿಗೆ : - ಬುಟ್ಟಿಗೆ ಬಲೂನು ಹಾಕುವುದು, * ದೋಸೆ ಕಾವಲಿ.
ಯುವಕರಿಗೆ :
ನಿಧಾನ ಬೈಕ್ ಸವಾರಿ, * ಮಡಕೆ ಒಡೆಯುವುದು, * ತೆಂಗಿನಕಾಯಿ ಕುಟ್ಟುವುದು, * ಬಲೂನು ಒಡೆಯುವುದು ( 2 ಜನರ ತಂಡ ), * ತೆಂಗಿನಕಾಯಿ ಸುಳಿಯುವುದು, * ಹಗ್ಗ ಜಗ್ಗಾಟ ಪುರುಷರಿಗೆ ಮಾತ್ರ.