Wednesday, May 15, 2024
spot_imgspot_img
spot_imgspot_img

ಆಸ್ಪತ್ರೆಗೆ ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ; ಗರ್ಭಿಣಿ ಪತ್ನಿ ಮತ್ತು ಪತಿ ಸಜೀವ ದಹನ

- Advertisement -G L Acharya panikkar
- Advertisement -

ಕೇರಳ : ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಗರ್ಭಿಣಿ ಸೇರಿ ಇಬ್ಬರು ಸಜೀವ ದಹನವಾಗಿರುವ ಘಟನೆ ಕಣ್ಣೂರಿನಲ್ಲಿ ಗುರುವಾರ ನಡೆದಿದೆ.

ಕಾರಿನಲ್ಲಿದ್ದ 6 ಜನರ ಪೈಕಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡೋರ್ ಜಾಮ್ ಆಗಿ ಮುಂದೆ ಇದ್ದವರು ಹೊರಬರಲಾರದೇ ಸಾವನ್ನಪ್ಪಿದ್ದಾರೆ.

ಕಣ್ಣೂರು ಕುಟ್ಯಾಟೂ‌ ಕಾರರಂಭ ನಿವಾಸಿಗಳಾದ ಪ್ರಜಿತ್‌ ಮತ್ತು ಅವರ ಪತ್ನಿ ರಿಷಾ ಮೃತಪಟ್ಟವರು, ಗರ್ಭಿಣಿಯಾದ ಪತ್ನಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ನಡುವೆ ಈ ಘಟನೆಯು ಕಣ್ಣೂರು ನಗರದ ಜಿಲ್ಲಾ ಆಸ್ಪತ್ರೆ ಬಳಿ ನಡೆದಿದೆ. ಕಾರಿನಲ್ಲಿ ಆರು ಮಂದಿ ಇದ್ದರು. ಕಾರು ಚಲಾಯಿಸುತ್ತಿದ್ದ ಗರ್ಭಿಣಿ ಹಾಗೂ ಆಕೆಯ ಪತಿ ಮುಂದಿನ ಸೀಟಿನಲ್ಲಿ ಹಾಗೂ ನಾಲ್ವರು ಹಿಂದಿನ ಸೀಟಿನಲ್ಲಿದ್ದರು.

ಬೆಂಕಿ ಕಾಣಿಸಿಕೊಂಡಾಗ ಹಿಂದಿನ ಬಾಗಿಲು ತೆಗೆದ ಬಳಿಕ ಮುಂದಿನ ಬಾಗಿಲಿನಿಂದ ಇಳಿಯುವ ಮೊದಲೇ ಬೆಂಕಿ ಆವರಿಸಿಕೊಂಡು ಸಿಲುಕಿದ್ದರು, ಇದರಿಂದ ಇಬ್ಬರಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಾಹನ ಚಲಾಯಿಸುತ್ತಿದ್ದ ಪತಿಯೊಂದಿಗೆ ಪತ್ನಿ ಮುಂಭಾಗದಲ್ಲಿದ್ದರು. ಹಿಂದೆ ಒಂದು ಮಗು ಸೇರಿ ನಾಲ್ವರು ಇದ್ದರು ಮತ್ತೊಂದು ವಾಹನದಲ್ಲಿ ಬಂದವರಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಡೋರ್ ಜಾಮ್ ಆಗಿದ್ದರಿಂದ ವಾಹನದಲ್ಲಿದ್ದವರು ಹೊರಬರಲು ಸಾಧ್ಯವಾಗಲಿಲ್ಲ.

ಬೆಂಕಿ ಹರಡುತ್ತಿದ್ದಂತೆ ಚಾಲಕ ಪ್ರಜಿತ್‌ ಹಿಂಬಾಗಿಲನ್ನು ತೆರೆದಿದ್ದಾನೆ. ಹಿಂಬದಿ ಸೀಟಿನಲ್ಲಿದ್ದ ಮಗು ಸೇರಿ ನಾಲ್ವರು ಪಾರಾಗಿದ್ದಾರೆ. ಆದರೆ ಮುಂಬಾಗಿಲು ತೆರೆಯಲಾಗಲಿಲ್ಲ. ಅಷ್ಟರೊಳಗೆ ಬೆಂಕಿ ಮತ್ತಷ್ಟು ವ್ಯಾಪಿಸಿದೆ. ಬದುಕುಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಅಗ್ನಿಶಾಮಕ ಠಾಣೆ ಇದ್ದರೂ ಇಬ್ಬರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಷ್ಟು ವೇಗದಲ್ಲಿ ಕಾರಿಗೆ ಬೆಂಕಿ ಆವರಿಸಿಕೊಂಡಿತ್ತು.

- Advertisement -

Related news

error: Content is protected !!