- Advertisement -
- Advertisement -
ಕಾರವಾರ:-ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಟ್ರಾಲರ್ ಬೋಟೊಂದು ಮುಳುಗಡೆಯಾಗಿ, ನಾಲ್ವರು ಮೀನುಗಾರರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಕುಮಟಾ ತಾಲೂಕಿನ ಧಾರೇಶ್ವರ ಬಳಿಯ ಸಮುದ್ರದಲ್ಲಿ ನಡೆದಿದೆ.
ಕುಮಟಾದ ಮೋಹನ್ ಹರಿಕಂತ್ರ ಕಿಮಾನಿ ಎನ್ನುವವರಿಗೆ ಸೇರಿದ ವಿಜಯಲಕ್ಷ್ಮಿ ಎನ್ನುವ ಬೋಟ್ ಮುಳುಗಡೆಯಾಗುತಿತ್ತು. ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿದಾಗ ಕಡಲಿನಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಬೋಟ್ ಮುಳಗತೊಡಗಿತ್ತು. ಇದನ್ನು ಗಮನಿಸಿದ ಸಮೀಪವಿದ್ದ ಇತರೇ ಬೋಟಿನ ಮೀನುಗಾರರು ಮುಳುಗಡೆಯಾದ ಬೋಟಿನಲ್ಲಿದ್ದ ನಾಲ್ವರು ಮೀನುಗಾರರನ್ನ ರಕ್ಷಿಸಿದ್ದಾರೆ. ಬಳಿಕ ಮುಳುಗುತ್ತಿದ್ದ ಬೋಟನ್ನು ಇತರೆ ಬೋಟ್ಗಳ ಸಹಾಯದಿಂದ ವಾಪಸ್ ಎಳೆದು ತಂದಿದ್ದಾರೆ.
- Advertisement -