Sunday, June 29, 2025
spot_imgspot_img
spot_imgspot_img

ಕಾಸರಗೋಡು: ಹತ್ಯೆ ಪ್ರಕರಣ; ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ..!

- Advertisement -
- Advertisement -

ಕಾಸರಗೋಡು: ಮೊಗ್ರಾಲ್ ಪೇರಾಲ್ ಪೆಟ್ಟೋಡಿ ಮೂಳೆಯ ಅಬ್ದುಲ್ ಸಲಾಂ (22) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳಿಗೆ ಜೀವಾವಧಿ ಸಜೆ ವಿಧಿಸಿ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಶಿಕ್ಷೆಗೊಳಗಾದ ಆರೋಪಿಗಳನ್ನು ಕುಂಬಳೆ ಬದರಿಯಾ ನಗರದ ಸಿದ್ದಿಕ್ (46 ) ಉಮ್ಮರ್ ಫಾರೂಕ್ (36) , ಪೆರುವಾಡಿನ ಶಹೀರ್ (36) , ಪೇರಾಲ್ ನ ನಿಯಾಜ್ (28) , ಪೆರುವಾಡ್ ಕೋಟೆಯ ಲತೀಫ್ (42), ಆರಿಕ್ಕಾಡಿ ಬಂಬ್ರಾಣದ ಹರೀಶ್ (36) ಎಂದು ಗುರುತಿಸಲಾಗಿದೆ.

ಪ್ರಕರಣದಲ್ಲಿ ಅರುಣ್ ಕುಮಾರ್ ಮತ್ತು ಖಲೀಲ್ ಖುಲಾಸೆಗೊಂಡಿದ್ದಾರೆ. 2017 ರ ಏಪ್ರಿಲ್ 30 ರಂದು ಅಬ್ದುಲ್ ಸಲಾಂ ರನ್ನು ಮೊಗಾರ್ಲ್ ಮಾಲಿಯಂಗರ ಕೋಟೆ ಸಮೀಪ ಕೊಲೆಗೈಯ್ಯಲಾಗಿತ್ತು.

ಸಲಾಂ ಜೊತೆಗಿದ್ದ ನೌಶಾದ್ ನನ್ನು ಇರಿದು ಗಾಯಗೊಳಿಸಲಾಗಿತ್ತು. ಅಬ್ದುಲ್ ಸಲಾಂ ನೇತೃತ್ವದ ತಂಡವು ಆರೋಪಿಯಾಗಿರುವ ಸಿದ್ದಿಕ್ ನ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿತ್ತು. ಇದಕ್ಕೆ ಪ್ರತಿಕಾರವಾಗಿ ಈ ಕೃತ್ಯ ನಡೆಸಿರುವುದಾಗಿ ತನಿಖೆಯಿಂದ ತಿಳಿದು ಬಂದಿತ್ತು.

- Advertisement -

Related news

error: Content is protected !!