Sunday, June 29, 2025
spot_imgspot_img
spot_imgspot_img

ಕಲ್ಲಡ್ಕ: (ಆ.11) ಬಂಟರ ಸಂಘ ಕಲ್ಲಡ್ಕ ವಲಯದ ಕೆಸರ್‌ಡೊಂಜಿ ದಿನ ಕಾರ್ಯಕ್ರಮ

- Advertisement -
- Advertisement -

ಕಲ್ಲಡ್ಕ: ಬಂಟರ ಸಂಘ ಕಲ್ಲಡ್ಕ ವಲಯದ ಕೆಸರ್‌ಡೊಂಜಿ ದಿನ ಕಾರ್ಯಕ್ರಮವು ಆಗಸ್ಟ್‌ 11ರಂದು ಬೆಳಗ್ಗೆ ಗಂಟೆ 9 ರಿಂದ ಬೊಂಡಾಲ ಅಂತರಗುತ್ತು ಚಾವಡಿ ಬಳಿ ನಡೆಯಲಿದೆ

ಸಚ್ಚಿದಾನಂದ ಶೆಟ್ಟಿ ಬೊಂಡಾಲ ಶ್ರೀ ದುರ್ಗಾ ಫೆಸಿಲಿಟಿ ಮ್ಯಾನೇಜ್ ಮೆಂಟ್ ಸರ್ವಿಸಸ್ ಪ್ರೈ.ಲಿ ಇವರ ಉದ್ಘಾಟನೆಯೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಕೆ. ಪದ್ಮನಾಭ ರೈ ಅಧ್ಯಕ್ಷರು ವಲಯ ಬಂಟರ ಸಂಘ ಕಲ್ಲಡ್ಕ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವೇದಿಕೆಯಲ್ಲಿ ಶ್ರೀಧರ ಶೆಟ್ಟಿ ಬೊಂಡಾಲ ಅಂತರಗುತ್ತು. ಪ್ರಗತಿಪರ ಕೃಷಿಕರು ,ಪ್ರತಿಭಾ ಎ. ರೈ, ಜತೆ ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ , ಮಹಾಬಲ ಶೆಟ್ಟಿ ಕಣ್ಣೆಮಜಲು, ನಿವೃತ್ತ ಜನರಲ್ ಮ್ಯಾನೇಜರ್ ಬಿ.ಎಸ್.ಎನ್.ಎಲ್ ,ಬಾಲಕೃಷ್ಣ ಆಳ್ವ ನಾಗ್ತಿಮಾರು, ಉಪಾಧ್ಯಕ್ಷರು ಕಲ್ಲಡ್ಕ ವಲಯ ಬಂಟರ ಸಂಘ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಬಂಟರ ಸಂಘ ಬಂಟ್ವಾಳ ತಾಲೂಕು, ಐತಪ್ಪ ಶೆಟ್ಟಿ ದೇವಶ್ಯ, ಅಧ್ಯಕ್ಷರು ಪಾಣೆಮಂಗಳೂರು ಗ್ರಾಮ ಸಮಿತಿ, ಶರತ್ ಶೆಟ್ಟಿ ಕಣ್ಣೆಮಜಲು, ಉದ್ಯಮಿ ಮಡಿಕೇರಿ, ಗಣೇಶ್ ಶೆಟ್ಟಿ ಗೋಳ್ತಮಜಲು, ಕಾರ್‍ಯದರ್ಶಿ ಕಲ್ಲಡ್ಕ ವಲಯ ಬಂಟರ ಸಂಘ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಬಂಟರ ಸಂಘ ಬಂಟ್ವಾಳ, ಸುಜಾತ ಪಿ.ರೈ ಕೋಶಾಧಿಕಾರಿ ಮಹಿಳಾ ಬಂಟರ ಸಂಘ ಬಂಟ್ವಾಳ ತಾಲೂಕು , ನೀನಾ ರೈ, ಅಧ್ಯಕ್ಷರು ಮಹಿಳಾ ವಿಭಾಗ ಕಲ್ಲಡ್ಕ ವಲಯ ಬಂಟರ ಸಂಘ, ಸಂತೋಷ್ ಶೆಟ್ಟಿ ಶೀನಾಜೆ, ಅಧ್ಯಕ್ಷರು ಯುವ ಬಂಟರ ಸಂಘ ಕಲ್ಲಡ್ಕ ವಲಯ ಇವರುಗಳ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಸಂಜೆ ಗಂಟೆ 4:00ಕ್ಕೆ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆಯು ನಡೆಯಲಿದೆ. ಈ ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇವರು ಭಾಗವಹಿಸಲಿದ್ದಾರೆ. ಕೆ. ಪದ್ಮನಾಭ ರೈ ಅಧ್ಯಕ್ಷರು ವಲಯ ಬಂಟರ ಸಂಘ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ಚಂದ್ರಹಾಸ. ಡಿ ಶೆಟ್ಟಿ, ಅಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು, ಡಾ| ಪ್ರಶಾಂತ್ ಮಾರ್ಲ, ಉಪಾಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು , ಜಗನ್ನಾಥ ಚೌಟ, ಕಾರ್ಯದರ್ಶಿ ಬಂಟರ ಸಂಘ ಬಂಟ್ವಾಳ ತಾಲೂಕು, ಲೋಕೇಶ ಶೆಟ್ಟಿ.ಕೆ. ಕೋಶಾಧಿಕಾರಿ ಬಂಟರ ಸಂಘ ಬಂಟ್ವಾಳ ತಾಲೂಕು ,ರಂಜನ್ ಕುಮಾರ್ ಶೆಟ್ಟಿ, ಜತೆ ಕಾರ್ಯದರ್ಶಿ ಬಂಟರ ಸಂಘ ಬಂಟ್ವಾಳ ತಾಲೂಕು, ರಮಾ ಭಂಡಾರಿ, ಅಧ್ಯಕ್ಷರು ಮಹಿಳಾ ವಿಭಾಗ ಬಂಟರ ಸಂಘ ಬಂಟ್ವಾಳ ತಾಲೂಕು , ನಿಶಾನ್ ಅಚ್ಚ, ಅಧ್ಯಕ್ಷರು ಯುವ ವಿಭಾಗ ಬಂಟರ ಸಂಘ ಬಂಟ್ವಾಳ ತಾಲೂಕು , ಶಶಿಧರ ಮಾರ್ಲ ಬೊಂಡಾಲ ಅಂತರಗುತ್ತು, ಉದ್ಯಮಿ ಮಂಗಳೂರು , ಶ್ರೀಧರ ಶೆಟ್ಟಿ ಪುಳಿಂಚ. ನ್ಯಾಯವಾದಿಗಳು ಮಂಗಳೂರು , ಸಂತೋಷ್‌ ಶೆಟ್ಟಿ ಅರೆಬೆಟ್ಟು. ಮಾತಾ ಬಿಲ್ಡರ್ಸ್ ಮಂಗಳೂರು, ಪ್ರೇಮನಾಥ ಶೆಟ್ಟಿ ಕೋರ್ಯ, ಜಿಲ್ಲಾ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ದ.ಕ. , ಸಂದೇಶ್ ಶೆಟ್ಟಿ ಅರೆಬೆಟ್ಟು, ಅಗ್ರಜಾ ಬಿಲ್ಡರ್ಸ್ ಮಂಗಳೂರು , ಉಲ್ಲಾಸ್ ರೈ, ವಿಜಯಾ ಕನ್‌ಸ್ಟ್ರಕ್ಷನ್ಸ್ ಮಂಗಳೂರು ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿರುವರು .

ಓಟ, ಹಗ್ಗ ಜಗ್ಗಾಟ, ತಪ್ಪಂಗಾಯಿ ಆಟ, ಕೆಸರಿನ ಆಟಗಳು ಹಾಗೂ ವಿವಿಧ ರೀತಿಯ ಮನೋರಂಜನಾ ಆಟಗಳು ನಡೆಯಲಿದ್ದು, ಸ್ವಜಾತಿ ಬಾಂಧವರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!