- Advertisement -
- Advertisement -




ಚಾಕುವಿನಿಂದ ಇರಿದು ಅಡುಗೆ ಭಟ್ಟನನ್ನ ಕೊಲೆ ಮಾಡಿದ ಘಟನೆ ಬೆಂಗಳೂರಿನ ರಾಜಾಜಿನಗರದ 6ನೇ ಬ್ಲಾಕ್ನಲ್ಲಿ ನಡೆದಿದೆ.
ರವಿ ಭಂಡಾರಿ(44) ಮೃತ ವ್ಯಕ್ತಿ. ಮೃತ ರವಿ ಭಂಡಾರಿ ರಾಜಾಜಿನಗರದ ಪಿಜಿಯಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅದೇ ಪಿಜಿಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಪದ್ಮಾವತಿ ಎಂಬ ಮಹಿಳೆಯ ಪುತ್ರ ರಾಹುಲ್ ಎಂಬಾತ ಈ ಕೃತ್ಯವೆಸಗಿದ್ದಾನೆ.
ಆರೋಪಿ ರಾಹುಲ್ ತನ್ನ ತಾಯಿ ಜೊತೆ ಅನ್ಯೋನ್ಯವಾಗಿ ಮಾತಾಡುತ್ತಿದ್ದಾನೆಂದು ಕೊಲೆ ಮಾಡಿದ್ದಾನೆ. ಇನ್ನು ಘಟನೆಗೂ ಮುನ್ನ ಆರೋಪಿ ತಾಯಿ ಪದ್ಮಾವತಿಯವರು ಪಿಜಿಯಲ್ಲಿದ್ದರು. ಈ ವೇಳೆ ರಾಹುಲ್, ರವಿ ಭಂಡಾರಿಗೆ ಕರೆ ಮಾಡಿ ನಿನ್ನ ಜೊತೆ ಮಾತಾಡಬೇಕೆಂದು ಮನೆಗೆ ಕರೆಸಿಕೊಂಡಿದ್ದ. ನಂತರ ಚಾಕುವಿನಿಂದ ಇರಿದು ಅಡುಗೆಭಟ್ಟ ರವಿ ಭಂಡಾರಿಯನ್ನು ಹತ್ಯೆ ಮಾಡಿ, ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Insta: glacharyajewellers
Fb: glacharya
- Advertisement -