Sunday, June 29, 2025
spot_imgspot_img
spot_imgspot_img

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಕಾರ್ಪೊರೇಟರ್ ಜಾಕೀರ್ ಬಂಧನ

- Advertisement -
- Advertisement -

ಬೆಂಗಳೂರು: ನಗರದ ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೋರೇಟರ್ ಜಾಕೀರ್ ನನ್ನು ಸಿಸಿಬಿ ಬಂಧಿಸಿದೆ. ಆರೋಪಿ ಜಾಕೀರ್ ಈಗಾಗಲೇ ಬಂಧನದಲ್ಲಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರ ಆಪ್ತನಾಗಿದ್ದಾನೆ.

ಸಂಪತ್ ರಾಜ್ ಬಂಧನದ ಬಳಿಕ ಕೂಡ ಜಾಕೀರ್ ತಲೆಮರೆಸಿಕೊಂಡಿದ್ದ. ಕಳೆದ ಮೂರು ತಿಂಗಳಿನಿಂದ ಬಂಧನದಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದ. ಈ ಹಿಂದೆ ಕೂಡ ಸಿಸಿಬಿ ಜಾಕೀರ್ ನನ್ನು ವಿಚಾರಣೆಗೆ ಗುರಿಪಡಿಸಿತ್ತು.

ಮೊಬೈಲ್ ವಶಪಡಿಸಲಾಗಿತ್ತು. ಇದೀಗ ಮೊಬೈಲ್ ಡೇಟಾ ರಿಟ್ರೀವ್ ಮಾಡಲಾಗಿದ್ದು ಇದರ ಆಧಾರದಲ್ಲಿ ಜಾಕೀರ್ ನನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರು ಇದೀಗ ಜಾಕೀರ್ ನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.

- Advertisement -

Related news

error: Content is protected !!