ಕೋಲಾರ: ವಿವಾಹಿತೆಯೊಬ್ಬಳ ಸಹವಾಸ ಮಾಡಿದ್ದ ನವವಿವಾಹಿತ ಯುವಕನೊಬ್ಬ ಆಕೆಯಿಂದಲೇ ದುರಂತ ಅಂತ್ಯ ಕಂಡಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿ ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಜಾಬೀರ್ಗೆ ಕಳೆದ ತಿಂಗಳಷ್ಟೇ ಮಾದುವೆಯಾಗಿತ್ತು. ಇದಾದ ಕೆಲವೇ ದಿನದಲ್ಲಿ ಈತ ನಾಪತ್ತೆಯಾಗಿದ್ದ. ಪಾಲಕರು ಮಗ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಇದೀಗ ಈತನ ಮೃತದೇಹ ಬೀದರ್ನ ನಿಡುವಂಚಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಈತ ಕೊಲೆಯಾಗಿದ್ದು ತನ್ನ ಪ್ರೇಯಸಿ ಕೈಯಿಂದಲೇ ಎಂಬ ಭಯಾನಕ ರಹಸ್ಯ ಬಯಲಾಗಿದೆ.
ಬೇರೆ ರಾಜ್ಯಗಳಿಂದ ಕಾರುಗಳನ್ನು ಖರೀದಿಸಿ ತಂದು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ ಜಾಬೀರ್, ಜಿಮ್ ಬಾಡಿ ಮೇಂಟೈನ್ ಮಾಡಿಕೊಂಡು ಗಟ್ಟಿಮುಟ್ಟಾಗಿದ್ದು ತನ್ನ ಮದುವೆಗೂ ಮುನ್ನ ತಂದೆಯ ದೂರದ ಸಂಬಂಧಿ ವಿವಾಹಿತ ಮಹಿಳೆ ಝಕಿಯಾ ಜತೆ ಸಲುಗೆ ಬೆಳೆಸಿಕೊಂಡಿದ್ದ.
ಈ ನಡುವೆ ಜಾಬೀರ್ಗೆ ಪಾಲಕರು ಚಿಕ್ಕಬಳ್ಳಾಪುರದಲ್ಲಿ ಬೇರೊಬ್ಬ ಯುವತಿ ಜತೆ ಮದುವೆ ಮಾಡಿದ್ದರು. ತನ್ನ ಪ್ರಿಯಕರ ಬೇರೊಬ್ಬಳನ್ನು ಮದುವೆ ಮಾಡಿಕೊಂಡದ್ದನ್ನು ಸಹಿಸದ ಝಕಿಯಾ, ಏನೇನೋ ನೆಪ ಹೇಳಿ ಜಾಬೀರ್ನನ್ನು ಹೈದ್ರಾಬಾದ್ಗೆ ಕರೆಸಿಕೊಳ್ಳುವ ನಾಟಕವಾಡಿದ್ದಾಳೆ. ಬಳಿಕ ದಾರಿ ಸುಪಾರಿ ಕೊಟ್ಟು ಮಾರ್ಗಮಧ್ಯೆ ಭೀಕರವಾಗಿ ಕೊಲೆ ಮಾಡಿಸಿದ್ದಾಳೆ.