Saturday, May 18, 2024
spot_imgspot_img
spot_imgspot_img

‘ಗಾನಗಂಧರ್ವನ’ ಸಂಗೀತ ಸೇವೆಗೆ ಅಡ್ಡಿಯಾದ ಕೊರೊನಾ

- Advertisement -G L Acharya panikkar
- Advertisement -

ಕೊಲ್ಲೂರು: ಕಳೆದ 48 ವರುಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ತನ್ನ ಹುಟ್ಟುಹಬ್ಬ ಆಚರಿಸುತ್ತಿದ್ದ ಗಾನಗಂಧರ್ವ ಡಾ| ಕೆ.ಜೆ. ಯೇಸುದಾಸ್‌ ಅವರು ಈ ಬಾರಿ 81ನೇ ಹುಟ್ಟುಹಬ್ಬವನ್ನು ಆಚರಿಸಲು ಕೊಲ್ಲೂರಿಗೆ ಬರುತ್ತಿಲ್ಲ. ಅಮೆರಿಕದಲ್ಲಿ ಇರುವ ಅವರಿಗೆ ಕೊಲ್ಲೂರಿಗೆ ಆಗಮಿಸಲು ಕೋವಿಡ್ ಮಾನದಂಡ ಅಡ್ಡಿಯಾಗಿದೆ.

ಶ್ರೀ ಮೂಕಾಂಬಿಕೆಯ ಪರಮಭಕ್ತರಾದ ಯೇಸುದಾಸ್‌ ಪ್ರತಿವರ್ಷ ಜ. 9ರಂದು  ಶ್ರೀ ಕ್ಷೇತ್ರಕ್ಕೆ ಆಗಮಿಸಿ ಜ. 10ರ ಹುಟ್ಟುಹಬ್ಬದ ದಿನವಿಡೀ ದೇವಿಯ ಸನ್ನಿಧಿಯಲ್ಲಿ ಗಾನಾರ್ಚನೆ ನಡೆಸುವ ಪರಿಪಾಠ ಹೊಂದಿದ್ದರು. ಈ ಬಾರಿ ಅಮೆರಿಕದ ಡಲ್ಲಾಸ್‌ನಲ್ಲಿರುವ ತಮ್ಮ ನಿವಾಸದಿಂದಲೇ ವಾಗ್ದೇವಿಗೆ ಗಾನಾರ್ಚನೆ ನಡೆಸಲಿದ್ದು ಅದನ್ನು ಶ್ರೀ ಕ್ಷೇತ್ರದ ಸರಸ್ವತಿ ಮಂಟಪದಲ್ಲಿ ನಿರ್ಮಿಸಲಾಗುವ ದೊಡ್ಡ ಪರದೆಯ ಮೂಲಕ ಆನ್‌ಲೈನ್‌ನಲ್ಲಿ ಬಿತ್ತರಿಸಲಾಗುವುದು.

ಯೇಸುದಾಸ್‌ ಅವರ ಶಿಷ್ಯರು ಹಾಗೂ ಗಾಯಕ ಕಾಞಂಗಾಡ್‌ ರಾಮಚಂದ್ರನ್‌ ತಂಡದವರು ಕೊಲ್ಲೂರಿನಲ್ಲಿ ಅರ್ಚಕ ಕೆ.ಎನ್‌. ಗೋವಿಂದ  ಅಡಿಗರ ನೇತೃತ್ವದಲ್ಲಿ  ವಿಶೇಷ ಪೂಜೆ ಸಲ್ಲಿಸಲಿದ್ದಾರೆ

- Advertisement -

Related news

error: Content is protected !!