Monday, June 30, 2025
spot_imgspot_img
spot_imgspot_img

ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಾಲಯದಲ್ಲಿ ಗ್ರಾಮಸ್ಥರ ಸಭೆ-ದೈವಸ್ಥಾನ,ದೇವಾಲಯದ ಜೀರ್ಣೋದ್ಧಾರ ಕಾರ್ಯಗಳಿಗೆ ಸಮಿತಿ ರಚನೆ

- Advertisement -
- Advertisement -

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ,ಬೀಡಿನಮಜಲು ಆಧಿಪರಾಶಕ್ತಿ ದೇವಸ್ಥಾನ ಹಾಗು ಶಿರಾಡಿ ಧೂಮಾವತಿ ದೈವಸ್ಥಾನದ ಜೀರ್ಣೋದ್ದಾರ ಕಾರ್ಯಗಳ ಕುರಿತಾಗಿ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಾಲಯದಲ್ಲಿ ಗ್ರಾಮಸ್ಥರ ಸಭೆ ನಡೆಯಿತು.


ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚನೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ರಮೇಶ್ ಭಟ್ ಭಂಡಾರಮನೆ, ಕಾರ್ಯಾಧ್ಯಕ್ಷರಾಗಿ ದಿವಾಕರ ದಾಸ್ ನೇರ್ಲಾಜೆ, ಅಧ್ಯಕ್ಷರಾಗಿ ಕೋಲ್ಪೆಗುತ್ತು ರಾಜಾರಾಮ ಶೆಟ್ಟಿ,ಪ್ರಧಾನ ಕಾರ್ಯದರ್ಶಿಯಾಗಿ ಪ್ರಫುಲ್ಲ ಚಂದ್ರ ಕೋಲ್ಪೆ,ಜೊತೆ ಕಾರ್ಯದರ್ಶಿಯಾಗಿ ಜಗದೀಶ್ ದೇವಸ್ಯ ,ಕೋಶಾಧಿಕಾರಿಯಾಗಿ ವೆಂಕಟರಮಣ ಭಟ್ ಸೂರ್ಯ,ಸದಸ್ಯರಾಗಿ ಗೋಪಾಲಕೃಷ್ಣ ಭಟ್ ಬೈಪದವು,ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು,ಕೃಷ್ಣಪ್ಪ ಕೆಮನಾಜೆ,ಪದ್ಮನಾಭ ಸಪಲ್ಯ ಕೊಡಂಚರಪಾಲು,ಜಯಂತ ದೇವಸ್ಯ,ಈಶ್ವರ ಗೌಡ ನಾಯ್ತೋಟ್ಟು,ಸತೀಶ್ ಕಂದೆರ್ಲು,ಪುರುಷೋತ್ತಮ ಕೋಲ್ಪೆ,ಜನಾರ್ಧನ ಬಡಜ,ಹರೀಶ್ ಉರಿಮಜಲು,ರಾಘವ ಗೌಡ ಉರಿಮಜಲು ಇವರನ್ನು ಆಯ್ಕೆ ಮಾಡಲಾಯಿತು.


ಗೌರವಸಲಹೆಗಾರರಾಗಿ ವೆಂಕಟರಮಣ ಭಟ್ ದರ್ಬೆ,ಸುಬ್ರಾಯ ಭಟ್ ಕೊಂಕೋಡಿ,ಕೃಷ್ಣಪ್ಪ ಗೌಡ ಸೂರ್ಯ,ಸುಂದರ ಗೌಡ ಕೊಪ್ಪಳ,ಶಶಿಧರ ಭಂಡಾರಿ,ಶೀನ ಮೂಲ್ಯ ಕೂವೆತ್ತಿಲ,ತಿಮ್ಮಪ್ಪ ಸಪಲ್ಯ ದೇವಸ್ಯರವರನ್ನು ಆಯ್ಕೆ ,ಮಾಡಲಾಯಿತು.


ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಸುರೇಶ್ ಕೆ ಎಸ್ ಮುಕ್ಕುಡ ಹಾಗೂ ಸದಸ್ಯರಾಗಿ ಪ್ರಕಾಶ್ ಕೆ ಎಸ್,ದೇಜಪ್ಪ ಕೋಲ್ಪೆ,ವಿ ಕೆ ಕುಟ್ಟಿ,ಚಂದ್ರಶೇಖರ ಕಂಬಳಿ,ವಿಜಯ್ ಕುಮಾರ್ ಸೂರ್ಯ,ಉಷಾ ಮುಂಡ್ರಬೈಲು,ಶಶಿಪ್ರಭ ಮಿತ್ತೂರು,ಪ್ರಧಾನ ಅರ್ಚಕ ಗೋವಿಂದ ಜೋಯಿಸರವರು ಆಯ್ಕೆಯಾಗಿದ್ದಾರೆ.

- Advertisement -

Related news

error: Content is protected !!