Sunday, June 29, 2025
spot_imgspot_img
spot_imgspot_img

ಐದು ಲಕ್ಷ ವಂಚನೆ ಪ್ರಕರಣ; ಚೈತ್ರಾಳನ್ನು ವಿಚಾರಣೆಗೆ ಕರೆತಂದ ಕೋಟ ಪೊಲೀಸರು

- Advertisement -
- Advertisement -

ಬ್ರಹ್ಮಾವರ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚನೆ ಎಸಗಿ ಜೈಲು ವಾಸದಲ್ಲಿರುವ ಚೈತ್ರಾಳನ್ನು ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ಐದು ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಪೊಲೀಸರು ಬಾಡಿ ವಾರೆಂಟ್ ಮುಖೇನ ವಿಚಾರಣೆಗೆ ಕರೆತಂದರು. ಕೋಟ ಪೊಲೀಸ್ ಠಾಣೆಯಲ್ಲಿ ಚೈತ್ರಾ ವಿರುದ್ಧ ಸುಧೀನ್ ಪೂಜಾರಿ ಎಂಬವರು ದೂರು ದಾಖಲಿಸಿದ್ದರು.

ಈಗಾಗಲೇ ವಂಚನೆ ಪ್ರಕರಣವೊಂದರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚೈತ್ರಾಳನ್ನು ಪೊಲೀಸ್‌ ಕಸ್ಟಡಿಗೆ ಪಡೆದ ಕೋಟ ಪೊಲೀಸರು ಮಂಗಳವಾರ ಬೆಂಗಳೂರಿನಿಂದ ಬ್ರಹ್ಮಾವರಕ್ಕೆ ಕರೆತಂದಿದ್ದರು. ಬ್ರಹ್ಮಾವರ ಸರ್ಕಲ್‌ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಕೋಟ ಪಿಎಸ್ ಐ ಶಂಭುಲಿಂಗಯ್ಯ ಮತ್ತವರ ತಂಡ ಸುಧೀನ ಅವರು ನೀಡಿದ ದೂರಿನ ಕುರಿತಂತೆ ದಿನವಿಡೀ ವಿಚಾರಣೆ ನಡೆಸಿತು. ವಿಚಾರಣೆ ಪೂರ್ಣಗೊಂಡ ಬಳಿಕ ಕೋಟ ಪಿಎಸ್‌ಐ ಶಂಭುಲಿಂಗಯ್ಯ ಅವರು ಚೈತ್ರಾಳನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ನ್ಯಾಯಾಲಯ ಸಂಚಾರಿಪೀಠ ಬ್ರಹ್ಮಾವರ ನ್ಯಾಯಾಧೀಶ ಶ್ಯಾಮ್ ಪ್ರಕಾಶ್‌ ಮುಂದೆ ಹಾಜರುಪಡಿಸಿದರು. ನ್ಯಾಯಾಲಯದ ಕಾನೂನು ಪುಕ್ರಿಯೆಗಳನ್ನು ಮುಗಿಸಿದ ಬಳಿಕ ‘ಚೈತ್ರಾಳನ್ನು ಮಂಗಳೂರಿನ ಜೈಲಿಗೆ ಕಳುಹಿಸಿಕೊಡಲಾಯಿತು. ಅಲ್ಲಿಂದ ನಾಳೆ ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ.

- Advertisement -

Related news

error: Content is protected !!