Friday, June 27, 2025
spot_imgspot_img
spot_imgspot_img

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯತ್ವ ಪಡೆದು ಅಧ್ಯಕ್ಷ ಸ್ಥಾನ ಅಲಂಕರಿಸಿದ ಹರೀಶ್ ಇಂಜಾಡಿಯವರ ಭವಿಷ್ಯ ನಿರ್ಧಾರ..! ಜುಲೈ 3 ರಂದು ಹೈಕೋರ್ಟ್‌‌ನಲ್ಲಿ ತೀರ್ಪು …?

- Advertisement -
- Advertisement -

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಇಂಜಾಡಿಯವರ ಮೇಲೆ ಕಳೆದ ಕೆಲ ವರ್ಷಗಳಿಂದ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಅವರ ಮೇಲೆ ನಕಲಿ ಚೆಕ್ ನೀಡಿದ ಪ್ರಕರಣ, ಹಣ್ಣು ಕಾಯಿ ಟೆಂಡರ್‌ನಲ್ಲಿ ದೇವಾಲಯಕ್ಕೆ ವಂಚನೆ ಮಾಡಿದ ಆರೋಪ ಹಾಗೂ ಮಾಜಿ ರೌಡಿಅಸಾಮಿ ಎಂದು ಆರೋಪ ಕೇಳಿ ಬಂದಿತ್ತು.

ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮಾಜಿ ರೌಡಿ ಅಸಾಮಿ, ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿ, ಅಧ್ಯಕ್ಷ ಸ್ಥಾನ ಹಾಗೂ ದೇವಸ್ಥಾನದ ಆಡಳಿತ ಸಮಿತಿಗೆ ಸಂಬಂಧಪಟ್ಟ ಯಾವ ವಿಚಾರಗಳಲ್ಲೂ ಭಾಗವಹಿಸುವಂತಿಲ್ಲ ಮತ್ತು ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ. ಇವರ ಮೇಲೆ ಕೇಳಿ ಬಂದ ಎಲ್ಲಾ ಆರೋಪಗಳು ಸತ್ಯಾ ಸತ್ಯತೆಯಿಂದ ಕೂಡಿರುತ್ತದೆ. ಹಿಂದೂ ಧರ್ಮದ ಶ್ರದ್ಧಾ ಕೇಂದ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಒಬ್ಬ ಮಾಜಿ ರೌಡಿ ಅಸಾಮಿ ನಿರ್ವಹಿಸುತ್ತಿರುವುದು ಅತ್ಯಂತ ಖಂಡನೀಯ ಎಂಬುದಾಗಿ ಈ ಬಗ್ಗೆ ಸರಕಾರದ ಆದೇಶದ ವಿರುದ್ದ ದೇವಾಲಯದ ಭಕ್ತಾಭಿಮಾನಿಗಳ ಪರವಾಗಿ ಆಕಾಶ್‌ ಎಂಬವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ಈ ಬಗ್ಗೆ ಹೈಕೋರ್ಟ್‌‌ನಲ್ಲಿ ವಾದ ವಿವಾದಗಳು ನಡೆಯುತ್ತಿದ್ದು, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತ್ವ ಪಡೆದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಅಧ್ಯಕ್ಷರ ಭವಿಷ್ಯ ನಿರ್ಧಾರದ ಬಗ್ಗೆ ಜುಲೈ 3ರಂದು ಹೈಕೋರ್ಟ್ ತೀರ್ಪು ನೀಡುವ ಸಾದ್ಯತೆ ಇದೆ ಎಂಬ ಮಾಹಿತಿ ತಿಳಿದಿದೆ.

- Advertisement -

Related news

error: Content is protected !!