Friday, June 27, 2025
spot_imgspot_img
spot_imgspot_img

ಕುಂಡಡ್ಕ: ಬಿಜೆಪಿ ಪು. ಗ್ರಾ. ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್‌ರವರಿಗೆ ವಿಷ್ಣುಮೂರ್ತಿ ಯುವಕ ವೃಂದದ ವತಿಯಿಂದ ಅಭಿನಂದನೆ

- Advertisement -
- Advertisement -

ಕುಂಡಡ್ಕ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ (ರಿ)ವಿಷ್ಣುನಗರ ಕುಂಡಡ್ಕ ಇದರ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಯುವಕ ವೃಂದದ ಕಚೇರಿಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಯುವಕ ವೃಂದದ ವತಿಯಿಂದ ಅಭಿನಂದಿಸಲಾಯಿತು. ಈ ವೇಳೆ ಯುವಕ ವೃಂದದ ಅಧ್ಯಕ್ಷ ಮನೋಜ್ ಕಂಪ, ಕಾರ್ಯದರ್ಶಿ ಗಿರೀಶ್ ಹಡೀಲು, ಸದಸ್ಯರಾದ ಪ್ರಶಾಂತ್ ಬರೆ, ತೇಜಸ್ ಎಣ್ಣೆದಕಲ, ಕಿರಣ್ ಎಣ್ಣೆದಕಲ, ಹಾಗೂ ಸದಸ್ಯರು, ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಹರೀಶ್ ಮರುವಾಳ, ಗೋವಿಂದ್ ರಾಜ್ ಪೆರುವಾಜೆ ಉಪಸ್ಥಿತರಿದ್ದರು.

- Advertisement -

Related news

error: Content is protected !!