- Advertisement -
- Advertisement -
ಕುಂದಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆಶ್ವರ ಅಂಕದಕಟ್ಟೆಯ ಗೋಪಾಡಿ ರಸ್ತೆಯ ನಿವಾಸಿ ಅಕ್ಕಮ್ಮ ದೇವಾಡಿಗ ಅವರ ಮನೆಯ ಬಾವಿ ಆವರಣ ಸಮೇತ ಕುಸಿದು ಬಿದ್ದ ಘಟನೆ ನಡೆದಿದೆ.
ಭಾರೀ ಮಳೆಯಿಂದಾಗಿ ಕೋಟೇಶ್ವರ, ಬೀಜಾಡಿ-ಗೋಪಾಡಿ ಪರಿಸರದಲ್ಲಿ ನೀರಿನ ಹೊರಹರಿವಿಗೆ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ. ಇದರಿಂದಾಗಿ ಅಲ್ಲಲ್ಲಿ ಕೃತಕ ನೆರೆ ಉಂಟಾಗಿರುತ್ತದೆ ಎಂದು ತಿಳಿದುಬಂದಿದೆ.
ಹಲವಡೆ ಬಾವಿಗಳು ಇರುವಂತಹ ಪ್ರದೇಶಗಳಲ್ಲಿ ನೀರು ನಿಂತಿದೆ. ನೀರು ನಿಂತ ಭಾಗ ಕುಸಿಯುವ ಭೀತಿ ಇರುವುದರಿಂದ ಗ್ರಾಮ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ನಿಂತ ನೀರನ್ನು ಹರಿದು ಬಿಡಲು ವ್ಯವಸ್ಥೆ ಮಾಡುವುದು ಸೂಕ್ತವೆಂದು ಗ್ರಾ.ಪಂ.ಸದಸ್ಯ ತಿಸಿಳಿದ್ದಾರೆ.
- Advertisement -