Sunday, June 29, 2025
spot_imgspot_img
spot_imgspot_img

ಕುಂದಾಪುರ: ಆಳ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ದಾರಿ ತಪ್ಪಿ ಮರಳಿನಲ್ಲಿ ಸಿಲುಕಿಕೊಂಡ ದೋಣಿ..!

- Advertisement -
- Advertisement -

ಕುಂದಾಪುರ: ಮಲ್ಪೆ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಚುಕ್ಕಾಣಿ ಹಿಡಿಯುವವರ ನಿದ್ರಾಹೀನತೆಯಿಂದ ದಾರಿ ತಪ್ಪಿ ಬೀಜಾಡಿ ಕಡಲತೀರಕ್ಕೆ ಬಂದು ಮರಳಿನಲ್ಲಿ ಸಿಲುಕಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ.

ಎ. 30ರ ಮಧ್ಯರಾತ್ರಿ ಮಲ್ಪೆ ಬಂದರಿನಿಂದ ಬೋಟ್ ಹೊರಟಿತ್ತು.ಏಳು ಮೀನುಗಾರರು ದೋಣಿಯಲ್ಲಿದ್ದರು. ಆದರೆ, ಅವರೆಲ್ಲ ನಿದ್ದೆಗೆ ಜಾರಿದ್ದು, ಮೇ 1ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗ್ಲೂ ಕ್ಲಿಚ್ ಕಾಟೇಜ್ ಬಳಿಯ ಬೀಜಾಡಿ ಸಮುದ್ರ ತೀರಕ್ಕೆ ದೋಣಿ ತಲುಪಿತು. ಭಾರೀ ಗಾಳಿಯಿಂದಾಗಿ ದಿಕ್ಕು ಕೂಡ ಬದಲಾಗಿರಬಹುದು ಎಂದು ಶಂಕಿಸಲಾಗಿದೆ.

ಬೆಳಗಾಗುತ್ತಿದ್ದಂತೆಯೇ ದೋಣಿ ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ದೋಣಿಯಲ್ಲಿ ಮೀನುಗಾರರು ಯಾರೂ ಕಾಣದ ಕಾರಣ ಇದು ಬೇಹುಗಾರಿಕಾ ದೋಣಿಯೇ ಎಂಬ ಶಂಕೆಯೂ ವ್ಯಕ್ತವಾಗಿತ್ತು. ನಂತರ ಬೋಟ್ ಕೋಡಿಬೆಂಗ್ರೆಯ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಆರರಿಂದ ಏಳು ಮಂದಿ ಪಾಲುದಾರರು ಬೋಟ್ ಹೊಂದಿರುವುದು ಬೆಳಕಿಗೆ ಬಂದಿದೆ.

ದುರ್ಘಟನೆಯಿಂದಾಗಿ ಹತ್ತಿರದ ರೆಸಾರ್ಟ್‌ನಲ್ಲಿ ನೆಲೆಸಿರುವ ಪ್ರವಾಸಿಗರು ಹತ್ತಿರದಿಂದ ದೋಣಿಯನ್ನು ನೋಡುವ ಅವಕಾಶವನ್ನು ಪಡೆದರು. ದೋಣಿ ಮರಳಿನಲ್ಲಿ ಸಿಲುಕಿದ್ದರಿಂದ ಬೋಟ್‌ನ ಫ್ಯಾನ್‌ನ ಬ್ಲೇಡ್‌ಗಳು ಹಾನಿಗೊಳಗಾಗಿವೆ. ಅದನ್ನು ಸರಿಪಡಿಸಿ ಎರಡು ಜೆಸಿಬಿ ಹಾಗೂ ಎರಡು ಬೋಟ್‌ಗಳ ಸಹಾಯದಿಂದ ಬೋಟನ್ನು ಮತ್ತೆ ಆಳ ಸಮುದ್ರಕ್ಕೆ ಕೊಂಡೊಯ್ದು ಬುಧವಾರ ಮಧ್ಯಾಹ್ನ ಮಲ್ಪೆ ಬಂದರಿಗೆ ಕೊಂಡೊಯ್ಯಲಾಯಿತು.

- Advertisement -

Related news

error: Content is protected !!