ಮೂಡಬಿದ್ರೆ : ಅಕ್ರಮ ಗೋ ಸಾಗಾಟದ ಬಗ್ಗೆ ಶೀಘ್ರ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕು ವತಿಯಿಂದ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮೂಡಬಿದ್ರೆ ಪ್ರದೇಶದಲ್ಲಿ ಹಟ್ಟಿಯಿಂದಲೇ ಕದ್ದು ಅಕ್ರಮ ಗೋಸಾಗಾಟ ಮತ್ತು ಅಕ್ರಮ ಕಸಾಯಿಖಾನೆ ಯಲ್ಲಿ ಗೋವುಗಳನ್ನು ವದಿಸುವ ಬಗ್ಗೆ ಮತ್ತು ಈ ಬಗ್ಗೆ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹಿಂದು ಸಮಾಜವೇ ಇದನ್ನು ತಡೆಯಲು ರಸ್ತೆಗೆ ಇಳಿಯಲಿದೆ ಎಂದು ಮೂಡಬಿದ್ರೆ ಪೊಲೀಸ್ ಠಾಣೆಗೆ ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕಿನ ವತಿಯಿಂದ ದೂರು ನೀಡಲಾಯಿತು.
ಪುತ್ತಿಗೆ ಪದವಿನಲ್ಲಿ ಕಳೆದ ಒಂದು ವಾರದಲ್ಲಿ ಸುಮಾರು 40ಕ್ಕೂ ಅಧಿಕ ಗೋವುಗಳು ಕಳವಾಗಿದೆ. ಹಾಗೂ ಮೂಡಬಿದ್ರೆ ಪ್ರದೇಶದ ಪ್ರತೀ ಗ್ರಾಮದ ವ್ಯಾಪ್ತಿಯಲ್ಲಿಯೂ ಗೋವುಗಳು ಕಳವು ಆಗಿರುವ ವಿಚಾರವು ಸಂಘಟನೆಯ ಗಮನಕ್ಕೆ ಬಂದಿರುತ್ತದೆ. ಗೋವುಗಳ ನಿರಂತರ ಕಳ್ಳಸಾಗಾಟನೆಯಿಂದಾಗಿ ಕೃಷಿಕರು ಗಾಬರಿಗೊಂಡಿದ್ದು, ಕೃಷಿಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಕೃಷಿಕರಿಗೆ ಗೋವುಗಳ ಕಳ್ಳಸಾಗಾಟನೆಯಿಂದ ಅವರ ಬದುಕೇ ನಾಶ ಆಗುವ ಹಂತಕ್ಕೆ ಬಂದಿರುತ್ತದೆ. ಅನೇಕ ಕೃಷಿಕರು ಹೈನುಗಾರಿಕೆ ಮಾಡುವ ಉದ್ದೇಶಕ್ಕೋಸ್ಕರ ಸಾಲ ಮಾಡಿ ದನಗಳನ್ನು ಖರೀದಿ ಮಾಡುತ್ತಿದ್ದು, ಗೋವುಕಳ್ಳರು ಅಂತಹ ದನಗಳನ್ನೇ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ಘಟನೆಯು ಮೂಡಬಿದ್ರೆ ಪರಿಸರದಲ್ಲಿ ನಡೆಯುತ್ತಿದೆ.
ಮೂಡಬಿದ್ರೆ ಪರಿಸರದಲ್ಲಿ ಅಲ್ಲಲ್ಲಿ ಕಸಾಯಿಖಾನೆಗಳು ಕಾರ್ಯ ನಿರ್ವಹಿಸುತ್ತಿರುವ ವಿಚಾರವು ಸಂಘಟನೆಯ ಗಮನಕ್ಕೆ ಬಂದಿರುತ್ತದೆ. ಅಕ್ರಮ ಗೋವುಗಳ ಕಳ್ಳಸಾಗಾಣಿಗೆ ಮತ್ತು ಅಕ್ರಮ ಕಸಾಯಿಖಾನೆ ನಡೆಸುತ್ತಿರುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರಗುಡ್ಡೆ ತಾಲೂಕು ಸಂಯೋಜಕ ಸಂದೀಪ್ ಹೆಗ್ಡೆ ತಾಲೂಕು ಪ್ರಮುಖರಾದ ಅನೂಜ್ ಭಂಡಾರಿ, ನಿತೇಶ್ ಎಸ್ ಪೂಜಾರಿ ಉಪಸ್ಥಿತರಿದ್ದರು