Sunday, June 29, 2025
spot_imgspot_img
spot_imgspot_img

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಮತ್ತು ಭಾರತ್ ಪೆಟ್ರೋಲಿಯಂ ಆಶ್ರಯದಲ್ಲಿ ನೂತನ ಬಸ್ ತಂಗುದಾಣದ ಉದ್ಘಾಟನೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ಮತ್ತು ಭಾರತ್ ಪೆಟ್ರೋಲಿಯಂ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ವಿಟ್ಲ ಕಲ್ಲಡ್ಕ ರಸ್ತೆಯಲ್ಲಿ, ಸರಕಾರಿ ಪದವಿ ಕಾಲೇಜಿನ ದ್ವಾರದ ಮುಂಭಾಗದಲ್ಲಿ ನಿರ್ಮಾಣಗೊಂಡ ನೂತನ ಬಸ್ ತಂಗುದಾಣದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷ ವಸಂತ ಶೆಟ್ಟಿ ಎರ್ಮಿನಿಲೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆ 317 ಡಿ ಇದರ ಪ್ರಥಮ ಉಪರಾಜ್ಯಪಾಲ ಕುಡುಪಿ ಅರವಿಂದ ಶೆಣೈ PMJF, ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು, ಉಪಾಧ್ಯಕ್ಷೆ ಸಂಗೀತ ಪಾಣೆಮಜಲು, ಪಂಚಾಯತ್ ಸದಸ್ಯ ಹರೀಶ್ ಸಿ ಹೆಚ್, ಮಾಜಿ ಅಧ್ಯಕ್ಷ ಎಂ ಕೆ ಮೂಸಾ, ಲಯನ್ಸ್ ವಲಯಾಧ್ಯಕ್ಷ ಸಂದೇಶ್ ಶೆಟ್ಟಿ, ಲಯನ್ಸ್ ಕ್ಲಬ್ ನಿಕಟ ಪೂರ್ವ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್, ವಿಟ್ಲ ಆರಕ್ಷಕ ಠಾಣೆಯ ಎಸ್ ಐ ವಿದ್ಯಾ, ಪ್ರಾಂಶುಪಾಲರು ಪದ್ಮನಾಭ, ಐಟಿಐ ಪ್ರಾಂಶುಪಾಲರು ಹರೀಶ್,ಭಾರತ್ ಪೆಟ್ರೋಲಿಯಂ ಮಾಲಕ ಒ.ಎ ಕೃಷ್ಣ ದಂಪತಿಗಳು, ಸುಪುತ್ರಿ ಸುಕನ್ಯಾ, ಕೃಷ್ಣಯ್ಯ ವಿಟ್ಲ ಅರಮನೆ, ಲಯನ್ಸ್ ಕ್ಲಬ್ ವಿಟ್ಲ ಸಿಟಿ ಮಾಜಿ ಅಧ್ಯಕ್ಷ ಜಯರಾಮ್ ಬಲ್ಲಾಳ್, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿ ಸದಸ್ಯರಾದ ಸದಾನಂದ ಗೌಡ ಸೇರಾಜೆ, ಮೋಹನ್ ಕಟ್ಟೆ, ಪಿ ಸೀನ, ಧರ್ಣಪ್ಪ ಗೌಡ, ಕೃಷ್ಣಪ್ಪ ಮೂಲ್ಯ,ಶ್ವೇತಾ ರವಿಕುಮಾರ್, ಸಾಯಿ ಗೀತಾ ಪಡಿಯಾರ್, ಭಾಸ್ಕರ್ ರೈ ಇಂಜಿನಿಯರ್, ಪಾಣಾಜೆ ಲಯನ್ಸ್ ಕ್ಲಬ್ ನ ಶ್ರೀಪಾದ, ಲಯನ್ಸ್‌ ಕ್ಲಬ್‌ ಕುಡ್ಲ ಇದರ ಸಕ್ರಿಯ ಸದಸ್ಯ ಶ್ರೀಧರ್‌ ರಾಜ್‌ ಶೆಟ್ಟಿ, ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಶ್ರೀ ಕೃಷ್ಣ, ಶಿಶಿರ್ ಗೌಡ, ದಿನೇಶ್ ಆಚಾರ್ಯ, ಹಾಗೂ ಫಸ್ಟ್ ಗ್ರೇಡ್ ಕಾಲೇಜು ಮತ್ತು ಐಟಿಐ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕ ವೃಂದ ಹಾಗೂ ಊರಾಭಿಮಾನಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!