- Advertisement -
- Advertisement -
ಮಡಿಕೇರಿ: ಅನಾರೋಗ್ಯದಿಂದ ತಿಂಗಳ ಹಿಂದೆ ಮೃತಪಟ್ಟ ಪತಿಯ ಅಗಲುವಿಕೆಯ ನೋವಿನಿಂದ ಹೊರಬರಲಾರದೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸವಣೂರು ಗ್ರಾಮದ ಪೆರಿಯಡ್ಕ ನಿವಾಸಿ ದಿ.ದಿನೇಶ್ ಪೆರಿಯಡ್ಕ ಅವರ ಪತ್ನಿ ರೂಪಾ (30 ವ.) ಎಂದು ಗುರುತಿಸಲಾಗಿದೆ.
ರೂಪಾ ಮೂಲತಃ ಕೊಡಗು ಜಿಲ್ಲೆಯ ಪೆರಾಜೆಯ ಹೊದ್ದೆಟ್ಟಿಯವರು. ಎರಡು ವರ್ಷಗಳ ಹಿಂದೆ ರೂಪಾ ಅವರನ್ನು ಸವಣೂರಿನ ಪೆರಿಯಡ್ಕದ ದಿನೇಶ್ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆ.7ರಂದು ದಿನೇಶ್ ಪೆರಿಯಡ್ಕ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದರು. ಇದಾದ ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಕೊಡಗು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
- Advertisement -