Sunday, June 29, 2025
spot_imgspot_img
spot_imgspot_img

ಮಂಗಳೂರಿನ ಪ್ರತಿಷ್ಟಿತ ವಿನ್ಯಾಸ ಸಂಸ್ಥೆ ಮ್ಹಾಲಕ ಬಿಗ್ ಬಾಸ್ ಶೋ ಆಯ್ಕೆ

- Advertisement -
- Advertisement -

ಸುಳ್ಳು ಸುದ್ದಿ ವೈರಲ್

ಮಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಸಂಸ್ಥೆ ವಿನ್ಯಾಸ ಇದರ ಮ್ಹಾಲಕರಾದ ಚಿಂತನ್ ವಿನ್ಯಾಸ ಇವರು ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಆಯ್ಕೆ ಆಗಿದ್ದಾರೆ ಎಂದು ಸುಳ್ಳು ವದಂತಿ ಎಲ್ಲೆಡೆ ಹಬ್ಬುತ್ತಿದ್ದು, ಇದು ಅಕ್ಷರಶಃ ಸುಳ್ಳು ಎಂಬುದಾಗಿ ಚಿಂತನ್ ವಿನ್ಯಾಸ ಹೇಳಿಕೆ ನೀಡಿದ್ದಾರೆ.

ಚಿಂತನ್ ವಿನ್ಯಾಸ ಇವರು ಕಳೆದ ಕೆಲ ದಿನಗಳ ಹಿಂದೆ ಕಲ್ಲಡ್ಕ ಪರಿಸರದಲ್ಲಿ ಬಸ್ಸಿನಲ್ಲಿ ಸಿಕ್ಕಿದ ಬಂಗಾರದ ಬಳೆಯನ್ನು ವಿಟಿವಿ ಮಾಧ್ಯಮದ ಮೂಲಕ ವಾರಸುದಾರರಿಗೆ ಹಿಂದಿರುಗಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಇವರ ಭಾವಚಿತ್ರವನ್ನು ಎಡಿಟ್ ಮಾಡಿ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಆಯ್ಕೆ ಆಗಿದ್ದಾರೆ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಚಿಂತನ್ ರವರಿಗೆ ನೂರಾರು ಕರೆಗಳು ಬರುತ್ತಿವೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಚಿಂತನ್ ‘ಇದೊಂದು ಕಲಾವಿದರಿಗೆ ಅಥವಾ ಪ್ರತಿಷ್ಟಿತ ವ್ಯಕ್ತಿ ಹಾಗೂ ಸಮಾಜದಲ್ಲಿ ಸಾಧನೆ ಗೈದವರಿಗೆ ಭಾಗವಹಿಸುವ ವೇದಿಕೆಯಾಗಿದ್ದು ನನ್ನಂತಹ ಕನಿಷ್ಟ ಜ್ಞಾನ ಹೊಂದಿದವನಿಗೆ ಅಲ್ಲ ಮತ್ತು ನಾನೊಬ್ಬ ಸಾಮಾನ್ಯ ವ್ಯಕ್ತಿ ಸಾಧಿಸಲು ಇನ್ನೂ ಬಾಕಿ ಇದೆ ಎಂದು ಹೇಳಿಕೆ ನೀಡಿದರು.

ಈ ವಿಷಯದ ಕುರಿತಾಗಿ ಹಲವಾರು ಕರೆಗಳು, ವಾಟ್ಸಾಪ್ ಗ್ರೂಪ್‌ಗಳಲ್ಲಿ ಶುಭಕೋರುವ ಸಂದೇಶಗಳು ರವಾನೆಯಾಗಿದೆ. ಸಂದೇಶಗಳನ್ನು ನೀಡಿದವರು ಇದು ಸತ್ಯ ವದಂತಿ ಎಂದು ನಂಬಿದ್ದಾರೆ. ಹಾಗೆಯೆ ಉತ್ತಮ ಸಂದೇಶ ರೀತಿಯಲ್ಲಿ ಪ್ರತಿಕ್ರೀಯಿಸಿದ ಜನರು ನನ್ನ ಮೇಲೆ ಅಪಾರ ಗೌರವನ್ನು ನೀಡಿದ್ದಾರೆ. ಮುಂದೆಯೂ ನಿಮ್ಮ ಗೌರವಕ್ಕೆ ದಕ್ಕೆ ಯಾಗದಂತೆ ನೋಡಿಕೊಳ್ಳುತ್ತೇನೆ ಮತ್ತು ನಮ್ಮ ಬೆಳವಣಿಗೆಗೆ ನಿಮ್ಮ ಆಶಿರ್ವಾದ ಸದಾ ಬಯಸುತ್ತೇನೆ.’ ಎಂದು ಪ್ರತಿಕ್ರಿಯಿಸಿದ್ದಾರೆ.

- Advertisement -

Related news

error: Content is protected !!