Sunday, June 29, 2025
spot_imgspot_img
spot_imgspot_img

ಮಂಗಳೂರು: ನಾಪತ್ತೆಯಾದ ಯುವಕ ಶವವಾಗಿ ಪತ್ತೆ..!

- Advertisement -
- Advertisement -
vtv vitla

ಮಂಗಳೂರು : ನಾಪತ್ತೆಯಾದ ಯುವಕನೋರ್ವ ಶವವಾಗಿ ಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಹೊಸಕಾವೇರಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಹೊಸಕಾವೇರಿ ನಿವಾಸಿ ಚಂದ್ರಕಾತ್ (40) ಎಂದು ಗುರುತಿಸಲಾಗಿದೆ. ಚಂದ್ರಕಾಂತ್ ಸೋಮವಾರ ಬೆಳಿಗ್ಗೆ ಯಿಂದ ಏಕಾಏಕಿ ನಾಪತ್ತೆಯಾಗಿದ್ದು ಇಂದು ಮಂಗಳವಾರ ಮದ್ಯಾಹ್ನ ಸಮೀಪದ ಹಳೆಯ ಕಪ್ಪು ಕಲ್ಲಿನ ಕೋರೆಯಲ್ಲಿನ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಚಂದ್ರಕಾಂತ್ ಬಾವ ಕಳೆದ ಫೆಬ್ರವರಿಯಲ್ಲಿ ಮೃತರಾಗಿದ್ದರು. ನಂತರದ ದಿನಗಳಲ್ಲಿ ಚಂದ್ರಕಾಂತ್ ತೀವ್ರ ಮನನೊಂದಿದ್ದರು ಎನ್ನಲಾಗಿದೆ. ಸರಿಯಾದ ಕೆಲಸವೂ ಇಲ್ಲದೆ ಮಾನಸಿಕವಾಗಿ ನೊಂದು ಚಂದ್ರಕಾಂತ್ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!