

ವಿಟ್ಲ ಪೆರಾಜೆ ಜುಲೈ 3:ಮಾಣಿ ಪೆರಾಜೆಯ ವಿದ್ಯಾನಗರ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ನೂತನ ಶಾಲಾ ಮಂತ್ರಿಮಂಡಲದ ರಚನೆ ಹಾಗೂ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.
ಶಾಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಾಲಾ ನಾಯಕರ ಪಾತ್ರ ಅಪಾರ. ಎಲ್ಲಾ ಶಾಲಾ ಮಂತ್ರಿಗಳು ತಮ್ಮ ಖಾತೆಗಳನ್ನು ವ್ಯವಸ್ಥಿತವಾಗಿ ಮುನ್ನಡೆಸಿ ಎಂದು ಕಾರ್ಯಕ್ರಮದ ಅಧ್ಯಕ್ಷರೂ , ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರೂ ಹಾಗೂ ಶಾಲಾ ಸಂಚಾಲಕರಾದ ಪ್ರಹ್ಲಾದ್ ಶೆಟ್ಟಿ ಜೆ ಶುಭ ಹಾರೈಸಿದರು.
ಧನಾತ್ಮಕ ಟೀಕೆಗಳು ವ್ಯಕ್ತಿಯನ್ನು ಸದೃಢವಾಗಿ ಬೆಳೆಯಲು ಸಹಕರಿಸುತ್ತದೆ. ಶಾಲಾ ನಾಯಕತ್ವ ವಿದ್ಯಾರ್ಥಿಗಳನ್ನು ಇನ್ನೂ ಜವಾಬ್ದಾರಿಯುತರನ್ನಾಗಿ ಮಾಡುತ್ತದೆ ಎಂದು ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ ಹೇಳಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಶಾಲಾ ಪ್ರಧಾನಮಂತ್ರಿಯಾಗಿ -ಪ್ರೇಕ್ಷ (10ನೇ), ಉಪ ಪ್ರಧಾನಮಂತ್ರಿಯಾಗಿ ವರ್ಷಿತ್ ಬಿ.ಎಮ್ (9ನೇ) ಗೃಹ ಮಂತ್ರಿಯಾಗಿ ತರುಣ್ ಎಚ್ ಎಸ್, ಉಪ ಗೃಹ ಮಂತ್ರಿಯಾಗಿ ನಿವ್ಯ ರೈ (9ನೇ) ,ಶಿಕ್ಷಣ ಮಂತ್ರಿಯಾಗಿ ಪ್ರಕೃತಿ ಶೆಟ್ಟಿ (10ನೇ), ಉಪ ಶಿಕ್ಷಣ ಮಂತ್ರಿಯಾಗಿ ಸ್ವಸ್ತಿ (9ನೇ) ಸಂವಹನ ಮಂತ್ರಿಯಾಗಿ ಧೀರಜ್ (10ನೇ), ಉಪ ಸಂವಹನ ಮಂತ್ರಿಯಾಗಿ ಪ್ರಗತಿ (8ನೇ ),ಸಾಂಸ್ಕೃತಿಕ ಮಂತ್ರಿಯಾಗಿ ಮಾನ್ಯ ಆರ್ ಶೆಟ್ಟಿ (10ನೇ) ಉಪ ಸಾಂಸ್ಕೃತಿಕ ಮಂತ್ರಿಯಾಗಿ ಆಶ್ರಯ್ ಎಲ್ (9ನೇ), ಕ್ರೀಡಾ ಮಂತ್ರಿಯಾಗಿ ತನ್ವಿತ್ ಸಿ ಜಿ (9ನೇ), ಉಪ ಕ್ರೀಡಾ ಮಂತ್ರಿಯಾಗಿ ಮೊಹಮ್ಮದ್ ಸಹಲ್ (8ನೇ ) ಸ್ವಾಸ್ಥ್ಯ ಮತ್ತು ಆರೋಗ್ಯ ಮಂತ್ರಿಯಾಗಿ ವೃದ್ಧಿ ಕೊಂಡೆ (10ನೇ) ಉಪ ಸ್ವಾಸ್ಥ್ಯ ಮತ್ತು ಆರೋಗ್ಯ ಮಂತ್ರಿಯಾಗಿ ಸಿಂಚನಶ್ರೀ (9ನೇ) ವಿದ್ಯುತ್ ಮತ್ತು ಸಂಪನ್ಮೂಲ ಮಂತ್ರಿಯಾಗಿ ವರುಣ್ (9ನೇ), ಉಪ ವಿದ್ಯುತ್ ಮತ್ತು ಸಂಪನ್ಮೂಲ ಮಂತ್ರಿಯಾಗಿ ಶ್ರೀನಿಧಿ ಪಿ ಕೆ (8ನೇ ) ಪ್ರಮಾಣವಚನ ಸ್ವೀಕರಿಸಿದರು.
ಜಯಶ್ರೀ ಆಚಾರ್ಯ ಸ್ವಾಗತಿಸಿ , ಅಶ್ವಿನಿ ಪಿ ಆರ್ ವಂದಿಸಿದರು. ಲೀಲಾ ಕಾರ್ಯಕ್ರಮ ನಿರ್ವಹಿಸಿದರು.