- Advertisement -
- Advertisement -
ಮಂಜೇಶ್ವರ: ಕಾಂಗ್ರೆಸ್ ಪಕ್ಷದ ನೇತಾರ ಲಕ್ಷ್ಮೀಶ ರೈ ಪೈವಳಿಕೆ ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮಂಜೇಶ್ವರದಲ್ಲಿ ಚುನಾವಣಾ ಕಾವು ಜೋರಾಗ್ತಾ ಇದೆ. ಇದು ಬಿಜೆಪಿಯ ಪಾಲಿಗೆ ಭಾರೀ ಪ್ಲಸ್ ಪಾಯಿಂಟ್ ಆಗಿದ್ದು, ಕಾಂಗ್ರೆಸ್ ಗೆ ಒಂದು ರೀತಿಯಲ್ಲಿ ಭಾರೀ ಹೊಡೆತ ಬಿದ್ದಂತಾಗಿದೆ.
ಈ ಭಾರೀ ಮಂಜೇಶ್ವರ ವಿಧಾನಸಭೆಯಲ್ಲಿ ಬಿಜೆಪಿಯಿಂದ ಫಯರ್ ಮ್ಯಾನ್ ಸುರೇಂದ್ರನ್ ಅಖಾಡಕ್ಕೆ ಇಳಿದಿದ್ದು, ಬಿಜೆಪಿ ಇಲ್ಲಿ ತನ್ನ ಅಸ್ತಿತ್ವವನ್ನು ಹಿಡಿಯಲು ಮುಂದಾಗಿದೆ. ಜೊತೆಗೆ ಈಗಾಗ್ಲೇ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನ ಭದ್ರಪಡಿಸಿಕೊಂಡಿದೆ. ಆದ್ರೆ ಕಾಂಗ್ರೆಸ್ ಪಕ್ಷದ ಪ್ರಮುಖ ಕಾರ್ಯಕರ್ತರಲ್ಲಿ ಓರ್ವರಾದ ಪೈವಲಿಕೆ ಮಂಡಲದ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ನೀಶ ರೈ ರಾಜೀನಾಮೆ ನೀಡಿರುವುದು ಭಾರೀ ನಷ್ಟ ಉಂಟಾಗಿದೆ. ಹಾಗಾಗಿ ಈ ಭಾರೀ ಬಿಜೆಪಿಗೆ ಇದು ಪ್ಲಸ್ ಪಾಯಿಂಟ್ ಆಗಿದೆ. ಇದ್ರಿಂದಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಂಜೇಶ್ವರದಲ್ಲಿ ಭಾರೀ ಪೈಪೋಟಿ ನಡೆಯುವುದಂತೂ ಸತ್ಯ.
- Advertisement -