Thursday, April 25, 2024
spot_imgspot_img
spot_imgspot_img

ರಾಯರ ಭಕ್ತರಿಗೆ ನಿರಾಸೆ : ಮಂತ್ರಾಲಯದ ಬಾಗಿಲು ಸದ್ಯಕ್ಕೆ ತೆರೆಯಲ್ಲ ಎಂದ ಆಡಳಿತ ಮಂಡಳಿ

- Advertisement -G L Acharya panikkar
- Advertisement -

ರಾಯಚೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಮುಚ್ಚಿದ್ದ ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಬಾಗಿಲನ್ನು ಜುಲೈ 2ರಿಂದ ಸಾರ್ವಜನಿಕರಿಗಾಗಿ ತೆರೆಯಲಾಗುತ್ತಿದೆ ಎಂದು ಕಳೆದ ವಾರವಷ್ಟೇ ಆಡಳಿತ ಮಂಡಳಿ ತಿಳಿಸಿತ್ತು.ಆದರೆ ಕರೊನಾ ಸೋಂಕಿನ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯ ರಾಯರ ಮಠವನ್ನು ತೆರೆಯುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಈ ಕುರಿತು ಮಂತ್ರಾಲಯ ಮಠದ ಆಡಳಿತ ಮಂಡಳಿಯ ವ್ಯವಸ್ಥಾಪಕ ವೆಂಕಟೇಶ್ ಜೋಷಿ ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಮಠವನ್ನು ತೆರೆಯುವ ದಿನಾಂಕವನ್ನು ತಿಳಿಸಲಾಗಿಲ್ಲ.

- Advertisement -

Related news

error: Content is protected !!