Tuesday, July 8, 2025
spot_imgspot_img
spot_imgspot_img

ಪುತ್ತೂರು: ಅಣಬೆ ಪದಾರ್ಥ ಸೇವಿಸಿ 12 ಮಂದಿ ಅಸ್ವಸ್ಥ; ಇಬ್ಬರು ಗಂಭೀರ!

- Advertisement -
- Advertisement -

ಪುತ್ತೂರು: ಪುತ್ತೂರು ತಾಲೂಕಿನ ಪಡ್ನೂರಿನ ಕೊಡಂಗೆಯಲ್ಲಿ ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥಗೊಂಡ ಘಟನೆ ಅ.6 ರಂದು ಮಧ್ಯಾಹ್ನ ನಡೆದಿದೆ.

ಅಸ್ವಸ್ಥಗೊಂಡವರನ್ನು ರಾಘವ(42), ಲತಾ(35), ತ್ರಿಶಾ(10), ಕೇಶವ(45), ಅರ್ಚನಾ(10), ಹೊನ್ನ ಮ್ಮ (60), ಬೇಬಿ(35) ಎನ್ನ ಲಾಗಿದೆ ಹಾಗೂ ಇತರ ಬಗೆಗಿನ ಮಾಹಿತಿ ಲಭ್ಯವಾಗಿಲ್ಲ.

ಇಂದು ಮಧ್ಯಾಹ್ನ ಊಟದ ಜೊತೆಗೆ ಅಣಬೆ ಪದಾರ್ಥವನ್ನು ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

- Advertisement -

Related news

error: Content is protected !!