


ಬೆಂಗಳೂರು : ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ವತಿಯಿಂದ ಹಾಗೂ ಕಾಂಗ್ರೆಸ್ ಮುಖಂಡರುಗಳು ಹಲವು ದಲಿತ ಸಂಘಟನೆ ಸೇರಿ ರಾಜಭವನ ಚಲೋ ಪ್ರತಿಭಟನಾ ಸಮಾವೇಶವನ್ನು ನಡೆಸಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲ , ಬಿಜೆಪಿ ಪಕ್ಷಗಳ ವಿರುದ್ಧ ಪ್ರತಿಭಟಿಸಿ ವಾಗ್ದಳಿ ನಡೆಸಿದರು.ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಂತಿನಗರ ಕ್ಷೇತ್ರದ ದೊಮ್ಮಲೂರು ಶಾಖೆಯ ಅಂಬೇಡ್ಕರ್ ವಾದ ಸಂಘದ ಅಧ್ಯಕ್ಷರು , ಕಾಂಗ್ರೆಸ್ ಮುಖಂಡರು ಕುಮಾರ್ ಆರು ಮುಗ ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧ ನಡೆಯಾಗಿದೆ ಹಾಗಾಗಿ ಸಂವಿಧಾನ ರಕ್ಷಣೆಗಾಗಿ ಇಂತಹ ಹೋರಾಟಗಳು ಅನಿವಾರ್ಯ ದಲಿತರು, ರಾಜ್ಯದ ಹಿಂದುಳಿದ ವರ್ಗದವರು ಎಲ್ಲಾ ಸಂಘ ಸಂಸ್ಥೆಗಳು ಸೇರಿ ಬಿಜೆಪಿ , ಜೆಡಿಎಸ್ ಪಕ್ಷಗಳ ಕುತಂತ್ರವನ್ನು ಎದುರಿಸಿ ಸರಿಯಾದ ಪಾಠ ಕಲಿಸಬೇಕಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನಮ್ಮ ಎಲ್ಲಾ ಹಿಂದುಳಿದ , ದಲಿತ ವರ್ಗಗಳ ಶೋಷಿತ ವರ್ಗಗಳ ಆಶಾಕಿರಣ ಇಷ್ಟು ವರುಷಗಳ ಕಾಲ ರಾಜಕೀಯ ಜೀವನದಲ್ಲಿ ಅವರ ವಿರುದ್ಧ ಯಾವ ಕಪ್ಪು ಚುಕ್ಕಿಯಿಲ್ಲ ಇನ್ನು ಅವರ ಅಧಿಕಾರ ಅವಧಿಯಲ್ಲಿ ಅವರು ಮಾಡಿರುವ ಅಭಿವೃದ್ದಿ ಕೆಲಸಗಳು , ಜನಪರ ಯೋಜನೆಗಳನ್ನು ಕಂಡ ರಾಜ್ಯದ ಜನತೆ ಎರಡನೇ ಬಾರಿ ಅವರನ್ನು ಮುಖ್ಯಮಂತ್ರಿ ಯನ್ನಾಗಿ ಮಾಡಿದ್ದಾರೆ ಇದನ್ನು ಸಹಿಸದ ರಾಜ್ಯದ ಬಿಜೆಪಿ , ಜೆಡಿಎಸ್ ಪಕ್ಷಗಳು ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ. ಹೇಗಾದರು ಮಾಡಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿ , ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಆಸೆ ಪಡುತ್ತಿದ್ದಾರೆ. ಅದು ಅವರ ಭ್ರಮೆ ಅವರ ಹಗಲಿನ ಕನಸ್ಸು ಪಲಿಸದು ಇದಕ್ಕೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಬಿಜೆಪಿ ಪಕ್ಷವು ರಾಜ್ಯಭವನ ವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರ ಪೋಕ್ಸೋ ಪ್ರಕರಣ ಬಗ್ಗೆ ಕುಮಾರಸ್ವಾಮಿ ಕುಟುಂಬದ ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣ ರಾಜ್ಯದ ಜನರಿಗೆ ತಿಳಿದಿದೆ. ಅದನ್ನು ಬಿಟ್ಟು ಉತ್ತಮ ಆಡಳಿತ ನೀಡುತ್ತಿರುವ ನಮ್ಮ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ವಿರೋಧ ಪಕ್ಷಗಳ ಹೇಳಿಕೆಯಂತೆ ಕುಣಿಯುತ್ತಿರುವ ರಾಜ್ಯಪಾಲರು ಈ ಕೂಡಲೇ ತಮ್ಮ ಆದೇಶವನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.