


ಕರಿಂಕ : ಯಕ್ಷಗಾನ ಪ್ರಿಯೆ ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ಪ್ರತೀ ವರ್ಷವೂ ಪತ್ತನಾಜೆಯ ಸಂದರ್ಭದಲ್ಲಿ ಜರುಗುವ ಗೆಜ್ಜೆ ಸೇವೆ – ಯಕ್ಷಗಾನವು ಈ ಬಾರಿ ದಿನಾಂಕ 25 – 05 – 2024 ನೇ ಶನಿವಾರ ಸಾಯಂಕಾಲ 7: 00 ರಿಂದ ಜರಗಲಿರುವುದು.
ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಕಲಾ ಸಂಘ ಕರಿಂಕ ಇದರ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ” ಸುದರ್ಶನೋಪಖ್ಯಾನ” ಎಂಬ ಪೌರಾಣಿಕ ಪುಣ್ಯ ಕಥಾನಕ ಮೂಡಿಬರಲಿದೆ..
ವಿಶೇಷ ಆಕರ್ಷಣೆಯಲ್ಲಿ ತೆಂಕು ತಿಟ್ಟಿನ ಹೆಸರಾಂತ ಭಾಗವತರಾದ ಗಿರೀಶ್ ರೈ ಕಕ್ಕೆಪದವು ಹಾಗೂ ಭರತ್ ಶೆಟ್ಟಿ ಸಿದ್ಧಕಟ್ಟೆಯವರ ಸುಮಧುರ ಭಾಗವತಿಕೆಯಲ್ಲಿ ..ತಂಡದ ಕಲಾವಿದರ ಜತೆಯಲ್ಲಿ…. ಅತಿಥಿ ಕಲಾವಿದರಾಗಿ… ತೆಂಕುಟ್ಟಿನ ಗಜಮೇಳವೆಂದೇ ಹೆಸರು ಪಡೆದಿರುವ ಹನುಮಗಿರಿ ಮೇಳದ ಸವ್ಯಸಾಚಿ ಕಲಾವಿದರುಗಳಾದ ಪೆರ್ಲ ಜಗನ್ನಾಥ ಶೆಟ್ಟಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಹಾಗೂ ಪ್ರಸಾದ್ ಸವಣೂರು ಅವರುಗಳು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಸಮರ್ಥ ಹಿಮ್ಮೇಳ ತಂಡದ… ಚೆಂಡೆ – ಮದ್ದಳೆಯ ಝೇಂಕಾರದೊಂದಿಗೆ ಮೂಡಿಬರಲಿರುವ ಈ ಯಕ್ಷಗಾನ ಬಯಲಾಟದಲ್ಲಿ.. ನಮ್ಮೂರಿನ ಯಕ್ಷಗಾನ ಹಾಗೂ ರಂಗಭೂಮಿ ಕಲಾವಿದರು ಹಾಗೂ ಸುಮಾರು 20 ಕ್ಕೂ ಹೆಚ್ಚು ಬಾಲ ಪ್ರತಿಭೆಗಳು ಪಾತ್ರ ನಿರ್ವಹಿಸಲಿದ್ದಾರೆ.
ವಿ. ಸೂ :
ಯಕ್ಷಗಾನವು ದೇವಸ್ಥಾನದ ಹೊರ ಪ್ರಾಂಗಣದಲ್ಲಿ ಜರುಗುತ್ತದೆ. ಹಾಗಾಗಿ ಮಳೆಯಿಂದ ತೊಂದರೆಯಾಗದಂತೆ ವ್ಯವಸ್ಥೆ ಇರುತ್ತದೆ. ಪ್ರದರ್ಶನ ಜರುಗುವ ಹೊರ ಪ್ರಾಂಗಣಕ್ಕೆ ಸೂತಕಾದಿಗಳಿದ್ದವರೂ ಬರಬಹುದು ( ಹೆಣ್ಣು ಮಕ್ಕಳ ಮುಟ್ಟಿನ ಸೂತಕದವರನ್ನು ಹೊರತುಪಡಿಸಿ) ಯಕ್ಷಗಾನವು ಕಾಲಮಿತಿಯದ್ದಾಗಿರುತ್ತದೆ. ಸರಿಯಾಗಿ 7.45 ರಿಂದ 8:00 ಗಂಟೆಯ ಒಳಗೆ ಪ್ರಾರಂಭವಾಗುತ್ತದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.