- Advertisement -
- Advertisement -
ಬೆಂಗಳೂರು: ಮಂಗಳೂರಿಗೆ ಡಬಲ್ ಧಮಾಕ. ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆ ಜಾರಿ ಇರುವಾಗಲೇ ರಾಜ್ಯ ಸರಕಾರದ ಮಿಷನ್ 2022 ಯೋಜನೆಗೆ ಮಂಗಳೂರು ಆಯ್ಕೆಯಾಗುವ ಸಾಧ್ಯತೆ ಇದೆ.
ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ರೂಪಿಸಿರುವ “ಮಿಷನ್-2022′ ಮಾದರಿಯಲ್ಲೇ ಮಂಗಳೂರು ಸಹಿತ ಪ್ರಮುಖ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೆ ರಾಜ್ಯ ಸರಕಾರ ನಿರ್ಧರಿಸಿದೆ. ಮುಂದಿನ ಬಜೆಟ್ನಲ್ಲಿ ಯೋಜನೆ ಪ್ರಕಟಗೊಳ್ಳುವ ಸಂಭವವಿದೆ.
ಪ್ರಮುಖವಾಗಿ ಸುಗಮ ಸಂಚಾರ, ತ್ಯಾಜ್ಯ ವಿಲೇವಾರಿ ಮತ್ತು ಸ್ವತ್ಛತೆ, ಹಸುರೀಕರಣಕ್ಕೆ ಒತ್ತು ನೀಡುವುದು. ದಿನದ 24 ತಾಸು ನೀರು ಪೂರೈಕೆ ವ್ಯವಸ್ಥೆ ಕೈಗೊಳ್ಳುವುದು. ಎಲ್ಇಡಿ ದೀಪಗಳ ಅಳವಡಿಕೆ, ಸ್ಥಳೀಯ ಪರಂಪರೆ, ಸಾಂಸ್ಕೃತಿಕ ಇತಿಹಾಸ ದಾಖಲಿಸಿ ಸಾಕ್ಷ್ಯಚಿತ್ರ ಸಿದ್ಧಪಡಿಸಿ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಅಭಿವೃದ್ಧಿಗೆ ನೀಲನಕ್ಷೆ ರೂಪಿಸುವುದರ ಸಹಿತ ಹಲವಾರು ಕಾರ್ಯಕ್ರಮಗಳು ಈ ಮಿಷನ್ 2022ನಡಿ ಸೇರಿವೆ ಎನ್ನುತ್ತವೆ ಮೂಲಗಳು.
- Advertisement -