- Advertisement -
- Advertisement -
ಸ್ಪಂದಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ



ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಂಟ್ರಿಂಜ ಮತ್ತು ವಿಟ್ಲ ಅನಂತಾಡಿ ಪುತ್ತೂರಿಗೆ ಬಸ್ಸು ಸಂಚಾರ ಪುನರಾಂಭಿಸುವ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇವರಿಗೆ ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜಯಂತಿ ವಿ.ಪೂಜಾರಿ ಅವರು ಇತ್ತೀಚೆಗೆ 6-6-2025 ರಂದು ಪತ್ರ ಬರೆಯುವ ಮೂಲಕ ಮನವಿ ಸಲ್ಲಿಸಿದ್ದರು.
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಬಸ್ಸು ಆರಂಭಿಸುವ ಮೂಲಕ ಜನತೆಯ ಬೇಡಿಕೆಯನ್ನು ಈಡೇರಿಸಿದ್ದಾರೆ. ಇದಕ್ಕೆ ಪ್ರಯತ್ನ ಮಾಡಿ ವಿಶೇಷ ರೀತಿಯಲ್ಲಿ ಶ್ರಮ- ವಹಿಸಿದ ಶ್ರೀಮತಿ ಜಯಂತಿ ವಿ ಪೂಜಾರಿ ಅವರ ಸೇವೆ ಪ್ರಶಂಸನೀಯವಾಗಿದೆ.
- Advertisement -








