- Advertisement -
- Advertisement -
ಮುಂಬೈ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ನನ್ನು ಬುಧವಾರ (ಜೂ.23)ರಂದು ಎನ್ ಸಿ ಬಿ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
ಇಕ್ಬಾಲ್ ಕಸ್ಕರ್ನನ್ನು ಜಮ್ಮು ಕಾಶ್ಮೀರದಲ್ಲಿ ನಡೆದಿದ್ದ ಅಂತಾರಾಜ್ಯ ಮಾದಕ ವಸ್ತು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಈತ ಜಮ್ಮು ಕಾಶ್ಮೀರದಿಂದ ಪಂಜಾಬ್ ಮೂಲಕ ಮಾದಕ ವಸ್ತುಗಳನ್ನು ತಂದು ಮುಂಬೈನಲ್ಲಿ ಮಾರಾಟ ಮಾಡುತ್ತಿದ್ದ ಎಂದು ವರದಿಯಾಗಿದೆ. ಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿ 2003 ರಲ್ಲಿ ಅರಬ್ ಕೊಲ್ಲಿ ರಾಷ್ಟ್ರಗಳಿಂದ ಇಕ್ಬಾಲ್ ಕಸ್ಕರ್ನನ್ನು ಗಡಿಪಾರು ಮಾಡಲಾಗಿತ್ತು.
- Advertisement -