

ಎರುಂಬು:ಅಳಿಕೆ ಗ್ರಾಮದ ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ಪೂರ್ವಾಹ್ನ 6.00 ಗಂಟೆಯಿಂದ ಅಪರಾಹ್ನ 6.00 ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ವಸಂತಪೂಜೆ ನಡೆಯಿತು.

ಭಜನಾ ಕಾರ್ಯಕ್ರಮವನ್ನು ನಿವೃತ್ತ ಯೋಧ ಶಿವರಾಮ್ ಭಟ್ ಬೈರಿಕಟ್ಟೆ ಉದ್ಘಾಟಿಸಿದರು.ವಿಟ್ಲ ಸೀಮೆಯು 16 ಗ್ರಾಮಗಳನ್ನು ಒಳಗೊಂಡು, ಪ್ರತಿಗ್ರಾಮಗಳ ದೇವಸ್ಥಾನಗಳ, ದೈವ ಸ್ಥಾನ, ಮಾಡಗಳ ಅನುವಂಶಿಕ ಮುಕ್ತೇಸರರಾಗಿ ವಿಟ್ಲ ಸೀಮೆಯ ಅರಸರು ಊರವರ ಸಹಕಾರದಿಂದ ನಡೆಸಲ್ಪಡುವುದು ವಾಡಿಕೆ. ಹೀಗೆ ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನವೂ ಸೀಮೆಯ ದೇವಸ್ಥಾನಗಳಲ್ಲಿ ಒಂದಾಗಿ ಪ್ರತಿ ವರ್ಷ ವಸಂತ ಮಾಸದಲ್ಲಿ ವಸಂತಪೂಜೆ ಮತ್ತು ದೀಪಾವಳಿ ಸಮಯದಲ್ಲಿ ತುಳಸಿ ಪೂಜೆ ನಡೆಯುತ್ತ ಬಂದಿದೆಯೆಂಬ ವಿಚಾರ ಇತಿಹಾಸ ದಾಖಲೆಯಲ್ಲೂ ಇದೆ.
ಊರವರು ಶ್ರದ್ದಾ-ಭಕ್ತಿಯಿಂದ ತನ್ನ ಭೂಮಿಯಲ್ಲಿ ಬೆಳೆದು ತಂದ ಫಲ ಸಮರ್ಪಣೆಯ ಮೂಲಕ ವಸಂತ ಪೂಜೆ ನಡೆಯುತ್ತದೆ. ಪ್ರಸ್ತುತ ಅರ್ಚಕರಾದ ಬಾಲಕೃಷ್ಣ ಕಾರಂತರ ಪೌರೋಹಿತ್ಯದಲ್ಲಿ ಊರವರ ಸಹಕಾರದಿಂದ ನಿರಂತರ 12ಗಂಟೆಗಳ ಭಜನಾ ಕಾರ್ಯಕ್ರಮ, ವಿಷ್ಣುಸಹಸ್ರನಾಮ, ಪವಮಾನ ಅಭಿಷೇಕ, ಕಾರ್ತಿಕ ಪೂಜೆ ಅನ್ನಸಂತರ್ಪಣೆ ಮತ್ತು ವಸಂತಪೂಜೆ ಜರಗಿತು. ಊರವರು ಶ್ರದ್ದೆ ಮತ್ತು ಮುಗ್ದತೆಯಿಂದ ಭಾಗವಹಿಸಿದರು ಮತ್ತು ದೇವರ ಕೃಪೆಗೆ ಪಾತ್ರರಾದರು.ಸತತವಾಗಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಮಾಡುವ ಹೊತ್ತಲ್ಲೇ ದೇವರ ಮಂಗಲ ಪೂಜೆ ನೆರವೇರಿ ದೇಶದ ಬೆಳವಣಿಗೆಗೆ ಶ್ರಮಿಸುವ ಶಕ್ತಿ ಹಾಗೂ ಅವಕಾಶ ಮೋದಿಯವರಿಗೆ ದೊರಕಲೆಂದು ಪ್ರಾರ್ಥಿಸಿ ಶುಭ ಹಾರೈಕೆ ಮಾಡಲಾಯಿತು