- Advertisement -
- Advertisement -
ನವದೆಹಲಿ: ದೇಶ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಆದರೆ ಆ ಸವಾಲುಗಳನ್ನು ಎದುರಿಸಿ ಮುನ್ನುಗುತ್ತಿದ್ದೇವೆ. ಹೊಸ ದಶಕದಲ್ಲಿ ಹೊಸ ಆಶಾವಾದ, ಆತ್ಮ ವಿಶ್ವಾಸ ಸೃಷ್ಟಿಯಾಗಿದೆ. ಭಾರತದ ಬಗ್ಗೆ ನಮ್ಮವರೇ ವ್ಯಂಗ್ಯವಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ಭಾಷಣ ಕೇಳಬೇಕಿತ್ತು. ಆದರೆ ಭಾಷಣವೂ ಕೇಳದ ಸಾಕಷ್ಟು ಚರ್ಚೆ ಮಾಡಲಾಗಿದೆ. ಇದು ರಾಷ್ಟ್ರಪತಿ ಭಾಷಣದ ಶಕ್ತಿ. ರಾಷ್ಟ್ರಪತಿ ಭಾಷಣ ಹೊಸ ವಿಶ್ವಾಸ ಮೂಡಿಸಿದೆ. ದೇಶ ಸ್ವಾತಂತ್ರ್ಯಗೊಂಡು 75 ವರ್ಷ ಆಗುತ್ತಿದೆ. ದೇಶದ ಭವಿಷ್ಯಕ್ಕಾಗಿ ನಾವು ಸಿದ್ಧವಾಗುತ್ತಿದೆ. ದೇಶ ಕನಸುಗಳನ್ನು ಈಡೇರಿಸಲು ತಯಾರಿಗುತ್ತಿದ್ದೇವೆ. ಇಡೀ ವಿಶ್ವ ಇಂದು ಭಾರತವನ್ನು ನೋಡುತ್ತಿವೆ. ಭಾರತದ ಮೇಲೆ ವಿಶ್ವಾಸ ಇಟ್ಟಿವೆ ಎಂದರು.



- Advertisement -