Saturday, June 28, 2025
spot_imgspot_img
spot_imgspot_img

(ನ. 28-29) ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪರಿಹಾರ ಕಾರ್ಯಕ್ರಮಗಳು ಹಾಗೂ ಮುಷ್ಟಿಕಾಣಿಕೆ ಸಮರ್ಪಣೆ

- Advertisement -
- Advertisement -

ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪರಿಹಾರ ಕಾರ್ಯಕ್ರಮಗಳು ಹಾಗೂ ಮುಷ್ಟಿಕಾಣಿಕೆ ಸಮರ್ಪಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನ. 28ನೇ ಗುರುವಾರ ಮತ್ತು ನ.29ನೇ ಶುಕ್ರವಾರದಂದು ನಡೆಯಲಿದೆ.

ದಿನಾಂಕ: 28-11-2024ನೇ ಗುರುವಾರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 5:30ರಿಂದ ದೇವತಾಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ ನಡೆದು ಬಳಿಕ ವಾಸ್ತು ಹೋಮ, ವಾಸ್ತುಪೂಜಾ ಬಲಿ ನಡೆಯಲಿದೆ. ಬಳಿಕ ರಾತ್ರಿ 9:00 ರಿಂದ ಮಾಹಾಪೂಜೆ, ಪದ್ರಸಾದ ವಿತರಣೆ ನಡೆಯಲಿದೆ.

ದಿನಾಂಕ: ದಿನಾಂಕ 29-11-2024ನೇ ಶುಕ್ರವಾರ ಬೆಳಿಗ್ಗೆ ಗಂಟೆ 7:30ರಿಂದ ಮಹಾಗಣಪತಿ ಹೋಮ, ಬಿಂಬಶುದ್ಧಿ ಕಲಶಪೂಜೆ, ಬಿಂಬಶುದ್ಧಿ ಕಲಶಾಭಿಷೇಕ ನಡೆದು ಬಳಿಕ ಮಧ್ಯಾಹ್ನ ಗಂಟೆ 11:30ರಿಂದ ಊರಿನ ಭಕ್ತಜನರು ಹಾಗೂ ಬೆಳ್ಳಿಪ್ಪಾಡಿ ಕುಟುಂಬಸ್ಥರು ಎಲ್ಲರು ಸೇರಿ ಶ್ರೀ ದೇವರಿಗೆ ಮುಷ್ಟಿಕಾಣಿಕೆ ಸಮರ್ಪಣೆ ಮಾಡಿ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!