ವಿಜಯಲಕ್ಷ್ಮಿ ಮತ್ತು ರೇವತಿ ಎಂಬ ಆಶಾಕಾರ್ಯಕರ್ತೆಯರಿಗೆ ಸರಕಾರದ ಗ್ಯಾರಂಟಿ ಯೋಜನೆಯ ಸಮೀಕ್ಷೆಯನ್ನು ದಿನಾಂಕ 26-02-2024ರಿಂದ ಪ್ರಾರಂಭಿಸಬೇಕಾಗಿ ಮಾನ್ಯ ಜಿಲ್ಲಾಧಿಕಾರಿ ದ.ಕ.ಜಿಲ್ಲೆ ಇವರಿಂದ ಆದೇಶ ಬಂದಿದ್ದು, ತರಬೇತಿ ಕೂಡ ನೀಡಿರುತ್ತಾರೆ. ಸದ್ರಿ ಸಮಿಕ್ಷೆಯನ್ನು ಆಶಾಕಾರ್ಯಕರ್ತೆಯರಾದ ಜಯಲಕ್ಷ್ಮಿ ಮತ್ತು ರೇವತಿ ಮೊಬೈಲ್ ಆಪ್ ಮೂಲಕ ಬೇರೆ ಬೇರೆ ಇಲಾಖೆಗಳ ಸರ್ವೆಗಳು,ಸರಕಾರದ ಸರ್ವೆಗಳನ್ನೂ ಕೂಡ ಆಶಾಕಾರ್ಯಕರ್ತೆಯರಿಂದಲೇ ಮಾಡಿಸಿಕೊಳ್ಳುತ್ತಿದ್ದಾರೆ.
ಆದರೆ, ಆಶಾಕಾರ್ಯಕರ್ತೆಯರ ಕೆಲವೊಂದು ಆಕಾಂಶೆಗಳೊಂದಿಗೆ ಸರಕಾರದ ಮುಂದಿಟ್ಟ ಬೇಡಿಕೆಗಳನ್ನು ಸರಕಾರವು ಗಣನೆಗೆ ತೆಗೆದುಕೊಳ್ಳದೇ ಇದ್ದು, ಈ ಹಿಂದೆ ಸರಕಾರವು ನಡೆಸಿದ ಅಧಿವೇಶನದಲ್ಲಿಯೂ ಕರ್ನಾಟಕದ ಆಶಾಕಾರ್ಯಕರ್ತೆಯ ಪರವಾಗಿ ಯಾವುದೆ ಒಂದು ಭರವಸೆಯ ಮಾತನ್ನು ಸರಕಾರವು ಮಂಡಿಸಿಲ್ಲ ಹಾಗೂ ಯಾವುದೇ ಗೌರವಧನವನ್ನು ಹೆಚ್ಚಳ ಮಾಡಿರುವುದಿಲ್ಲ ಮತ್ತು ಪಿಂಚಣಿ ಸೌಲಭ್ಯವನ್ನು ನೀಡಿರುವುದಿಲ್ಲ.
ಆದ್ದರಿಂದ ಸರಕಾರದ ಗ್ಯಾರಂಟಿಯ ಬಗ್ಗೆ ಯಾವುದೇ ಸಮೀಕ್ಷೆಯನ್ನು ನಡೆಸುವುದಿಲ್ಲ ಎಂಬುದಾಗಿ ಮಾನ್ಯ ಜಿಲ್ಲಾಧಿಕಾರಿಯವರಿಗೆ ಆಶಾಕಾರ್ಯಕರ್ತೆಯರು ಆಕ್ಷೇಪಾ ಪತ್ರ ನೀಡಿರುತ್ತಾರೆ.