Saturday, June 28, 2025
spot_imgspot_img
spot_imgspot_img

ಬೆಳ್ತಂಗಡಿಯ ಯುವಕ ಒಮನ್ ದೇಶದಲ್ಲಿ ಅಪಘಾಕ್ಕೀಡಾಗಿ ಸಾವು; 25 ಲಕ್ಷ ರೂ. ಪರಿಹಾರ

- Advertisement -
- Advertisement -

ಮಂಗಳೂರು: 2 ವರ್ಷಗಳ ಹಿಂದೆ ಒಮನ್ ದೇಶದ ಮಬೇಲದಲ್ಲಿ ಸಂಭವಿಸಿದ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನೂರ್ ಮುಹಮ್ಮದ್ ಸಾವನ್ನಪ್ಪಿದ್ದರು. ಈ ಹಿನ್ನಲೆ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ದೊರಕಿಸಿ ಕೊಡುವಲ್ಲಿ ಸೋಶಿಯಲ್ ಫೋರಮ್ ಒಮಾನ್ ಯಶಸ್ವಿಯಾಗಿದೆ.

ತೀರಾ ಬಡಕುಟುಂಬದ ಯುವಕ ಬೆಳ್ತಂಗಡಿ ತಾಲೂಕಿನ ಸುನ್ನತ್ ಕೆರೆ ನಿವಾಸಿ ನೂರ್ ಮುಹಮ್ಮದ್ (25) ಅವರು ಒಮಾನ್‌ನ ಮುಸನ್ನದಲ್ಲಿನ ಮಸ್ಕತ್ ವಾಟರ್ ಬಾಟಲಿ ನೀರು ಕಂಪೆನಿಯಲ್ಲಿ ಸೇಲ್ಸ್ಮನ್ ಆಗಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. 2019ರ ಮೇ 11ರಂದು ಸಂಭವಿಸಿದ ವಾಹನ ಅಪಘಾತದಲ್ಲಿ ಅವರು ಮತ್ತು ಚಾಲಕ ಒಮಾನ್ ಪ್ರಜೆ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಎರಡೇ ದಿನಗಳಲ್ಲಿ ಊರಿಗೆ ಕಳುಹಿಸಿ ಕೊಡಲು ಸೋಶಿಯಲ್ ಫೋರಮ್ ವ್ಯವಸ್ಥೆ ಮಾಡಿತ್ತು.

2 ವರ್ಷಗಳ ಹೋರಾಟಕ್ಕೆ ಜಯ
ಸೋಶಿಯಲ್ ಫೋರಮ್ ತಂಡವು ಪರಿಹಾರ ಮೊತ್ತಕ್ಕಾಗಿ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ನಿರಂತರ 2 ವರ್ಷ ಗಳ ಹೋರಾಟದ ಫಲವಾಗಿ ಇದೀಗ 25 ಲಕ್ಷ ರೂ. ಪರಿಹಾರ ಮೊತ್ತ ಬಿಡುಗಡೆಯಾಗಿದೆ ಎಂದು ಸೋಶಿಯಲ್ ಫೋರಮ್ ಪ್ರಕಟನೆ ತಿಳಿಸಿದೆ. ನೂರ್ ಮುಹಮ್ಮದ್ ಅವರ ತಾಯಿ ಕೂಡ ಎರಡು ತಿಂಗಳ ಹಿಂದೆ ನಿಧನ ಹೊಂದಿದ್ದರು. ಇದೀಗ ಕುಟುಂಬದಲ್ಲಿ ತಂದೆ, ಅಣ್ಣ, ಅಕ್ಕ ಇದ್ದು, ಪರಿಹಾರದ ಮೊತ್ತವನ್ನು ಅವರಿಗೆ ಹಸ್ತಾಂತರಿಸಲಾಗಿದೆ.

driving
- Advertisement -

Related news

error: Content is protected !!