Sunday, June 29, 2025
spot_imgspot_img
spot_imgspot_img

ಕಂಬಳಬೆಟ್ಟು: ಚೈತ್ರ ಶಿಬಿರದ ಮೂರನೇ ದಿನ ಯುಗಾದಿ ಹಬ್ಬದ ಸಂಭ್ರಮ

- Advertisement -
- Advertisement -

ಕಂಬಳಬೆಟ್ಟು: ಧರ್ಮನಗರದ ಸಮಾಜ ಮಂದಿರದಲ್ಲಿ ನಡೆಯುತ್ತಿರುವ ಚೈತ್ರ ಶಿಬಿರದ ಮೂರನೇ ದಿನ ನಿನ್ನೆ ಹೊಸ ವರುಷ ಯುಗಾದಿ ಹಬ್ಬದ ಆಚರಣೆ ಮಾಡಲಾಯಿತು.

ಶಿಬಿರದಲ್ಲಿ ಯುಗಾದಿಯ ವಿಶೇಷತೆಯನ್ನು ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವೀಣಾ ಸರಸ್ವತಿ ಮಾತಾಜಿ ತಿಳಿಸಿದರು.

ಪುರೋಹಿತರು ಗೋಪಾಲ ಕೃಷ್ಣ ಭಟ್ ಅವರು ಪಂಚಾಂಗ ಶ್ರವಣ ನಡೆಸಿಕೊಟ್ಟರು. ನಂತರ ದಂತ ವೈಧ್ಯರು ಪುತ್ತೂರಿನ ಡಾ. ಆಶಾ ಮಾತಾಜಿ ದಂತ ಆರೋಗ್ಯದ ಕುರಿತು ಮಾಹಿತಿ ನೀಡಿದರು.

ಶಿಬಿರದಲ್ಲಿ ಭಜನೆ ಅಭ್ಯಾಸ, ಯೋಗಾಸನ, ನಾಟಕ ಅಭ್ಯಾಸ, ಯಕ್ಷಗಾನ ಅಭ್ಯಾಸ ನಡೆಸಿ, ನಂತರ ದೇಶಿಯ ಆಟಗಳನ್ನು ಆಡಿಸಲಾಯಿತು. ಶಿಬಿರದಲ್ಲಿ ಸುಮಾರು 190 ಮಕ್ಕಳು ಭಾಗವಹಿಸಿದ್ದರು.

- Advertisement -

Related news

error: Content is protected !!