Saturday, June 28, 2025
spot_imgspot_img
spot_imgspot_img

ಸೆಪ್ಟೆಂಬರ್-04ರಿಂದ ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ಹರಕೆ ಕೋಲ ಸೇವೆಗೆ ಅವಕಾಶ.ಅಗೇಲು ಸೇವೆಗೆ ಅವಕಾಶವಿಲ್ಲ.- ಕ್ಷೇತ್ರದ ಪ್ರಕಟಣೆ.

- Advertisement -
- Advertisement -

ವಿಟ್ಲ:- ಕೊರೊನಾ ಮಹಾಮಾರಿಯಿಂದ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ರದ್ದು ಗೊಳಿಸಲಾಗಿದ್ದ ಜಿಲ್ಲೆಯ ಪ್ರಸಿದ್ಧ ಕಾರಣೀಕ ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ನಾಳೆಯಿಂದ (ಸೆಪ್ಟೆಂಬರ್-04) ಹರಕೆ ಕೋಲ ಸೇವೆ ಆರಂಭವಾಗಲಿದೆ.

ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ವಾರದಲ್ಲಿ ಮೂರು ದಿನ ನಡೆಯುತ್ತಿದ್ದ ಅಗೇಲು ಸೇವೆ ಹಾಗೂ ಕೋಲ ಸೇವೆಯೂ ಸರಕಾರ ನಿಯಮದಂತೆ ರದ್ದು ಗೊಳಿಸಲಾಗಿತ್ತು.ಕೊರೊನಾ ಮಹಾಮಾರಿಯಿಂದ ಜನಸೇರಲು ಅವಕಾಶ ಇರದ ಕಾರಣ ಕ್ಷೇತ್ರದಲ್ಲಿ ಯಾವುದೇ ಸೇವೆಗಳು ಇರಲಿಲ್ಲ.

ಇದೀಗ ಸರಕಾರದ ಆದೇಶದಂತೆ ಸೆಪ್ಟೆಂಬರ್-04 (ನಾಳೆಯಿಂದ) ಕೇವಲ ಹರಕೆ ಕೋಲ ಸೇವೆ ಮಾತ್ರ ಆರಂಭವಾಗಲಿದ್ದು , ಅಗೇಲು ಸೇವೆ ಅವಕಾಶವಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!