Thursday, April 25, 2024
spot_imgspot_img
spot_imgspot_img

*ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬಂದ ಗಜಪಡೆ. ಕೃಷಿ ನಾಶಪಡಿಸುತ್ತಿರುವ ಭೀತಿಯಲ್ಲಿ ಸ್ಥಳೀಯ ನಿವಾಸಿಗಳು*.!

- Advertisement -G L Acharya panikkar
- Advertisement -

ನೆಲ್ಯಾಡಿ :-ಇಲ್ಲಿನ ಪೆರಿಯಶಾಂತಿ ಸಮೀಪದ  ಕೌಕ್ರಾಡಿ ಗ್ರಾಮ ವ್ಯಾಪ್ತಿಯ ಪೆರಿಯಶಾಂತಿ, ಮಣ್ಣಗುಂಡಿ ಪರಿಸರದಲ್ಲಿ ಹಲವು ಸಮಯಗಳಿಂದ  ಕಾಡಾನೆಯೊಂದು ಸಂಚರಿಸುತ್ತಿದ್ದು,ಕೃಷಿ ನಾಶಪಡಿಸುವುದು ಬಿಟ್ಟರೆ ಜನರಿಗೆ  ಈ ತನಕ ಯಾವುದೇ ತೊಂದರೆ ನೀಡಿಲ್ಲ.ಆದರೂ ಸ್ಥಳೀಯ ಜನರಲ್ಲಿ ಭೀತಿ ಆವರಿಸಿದೆ.

ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬಂದ ಗಜಪಡೆ.

Posted by Vtv Vitla on Sunday, 19 July 2020

ಈ ಪರಿಸರದಲ್ಲಿ ರಾತ್ರಿ ವೇಳೆ ಕೃಷಿಕರ ತೋಟಕ್ಕೆ ನುಗ್ಗಿ  ಪುಂಡಾಟ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸುತ್ತಿದ್ದು,ಇಷ್ಟರವರೇಗೆ ಅರಣ್ಯ ಸಮೀಪದ ತೋಟಗಳಿಗೆ ದಾಳಿ ಮಾಡಿ ಕೃಷಿಗಳನ್ನು ತಿನ್ನುವುದು ನಾಶಪಡಿಸುತ್ತಿದ್ದ ಈ ಆನೆ ತನ್ನ ವ್ಯಾಪ್ತಿಯನ್ನು ಇನ್ನೂ ಗ್ರಾಮೀಣ ಪ್ರದೇಶಕ್ಕೆ ಮುಂದುವರೆಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಶನಿವಾರ  ರಾತ್ರಿ ಪೆರಿಯಶಾಂತಿ ಸಮೀಪದ ಮಣ್ಣಗುಂಡಿಯ ಸೇಸಪ್ಪ, ತೋಮಸ್, ಹಮೀದ್, ಇಬ್ರಾಹಿಂ, ನಾರಾಯಣ ಎಂಬವರ ತೋಟಕ್ಕೆ ನುಗ್ಗಿ ಬಾಳೆಗಿಡಗಳು, ತೆಂಗಿನ ಮರವನ್ನು ಕೆಡವಿ ಹಾನಿಗೊಳಿಸಿದೆ.

- Advertisement -

Related news

error: Content is protected !!