- Advertisement -
- Advertisement -



ಬಂಟ್ವಾಳ: ದುರಸ್ತಿಗೆ ನೀಡಿದ್ದ ಪಿಕ್ಅಪ್ನ್ನು ಚಲಾಯಿಸಿಕೊಂಡುವ ಬರುತ್ತಿರುವ ವೇಳೆ ಪಿಕ್ ಅಪ್ ಡಿವೈಡರ್ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಕಕ್ಯಪದವು ಮೂಲದ ಚಾಲಕ ಮೃತಪಟ್ಟ ಘಟನೆ ಮೇ 11ರ ತಡರಾತ್ರಿ 2 ಗಂಟೆಗೆ ಸಕಲೇಶಪುರ ಸಮೀಪದ ಕುಂಬಾರಕಟ್ಟೆಯಲ್ಲಿ ನಡೆದಿದೆ.
ಕಕ್ಯಪದವು ಅಂತರ ನಿವಾಸಿ ಹನೀಫ್(38) ಮೃತಪಟ್ಟವರು
ಹನೀಫ್ ರವರ ಸಂಬಂಧಿಯೊಬ್ಬರ ಪಿಕ್ ಅಪ್ ವಾಹನವನ್ನು ಹಾಸನದಲ್ಲಿ ದುರಸ್ತಿ ಮಾಡಿಸಿಕೊಂಡು ರಾತ್ರಿ ಅದರ ಮಾಲಕರ ಜತೆಗೆ ಚಲಾಯಿಸಿಕೊಂಡು ಬರುತ್ತಿರುವ ವೇಳೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಪಿಕ್ ಅಪ್ ಮಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಹನೀಫ್ ರವರು ವೃತ್ತಿಯಲ್ಲಿ ಜೀಪು ಚಾಲಕರಾಗಿದ್ದು, ಕಕ್ಯಪದವು-ಬಿ.ಸಿ.ರೋಡು ಮಧ್ಯೆ ಜೀಪಿನ ಮೂಲಕ ಪ್ರಯಾಣಿಕರನ್ನು ಸಾಗಿಸುತ್ತಿದ್ದರು. ಹೀಗಾಗಿ ಸ್ಥಳೀಯರ ವಿಶೇಷ ಅಭಿಮಾನವನ್ನು ಗಳಿಸಿಕೊಂಡಿದ್ದರು. ಜತೆಗೆ ಕರಾವಳಿ ಕ್ರೀಡೆಯಾದ ಕಂಬಳದ ಬಹುದೊಡ್ಡ ಅಭಿಮಾನಿಯಾಗಿದ್ದು, ಸ್ವತಃ ಕಂಬಳದ ಕೋಣಗಳನ್ನು ಸಾಕುತ್ತಿದ್ದರು.
- Advertisement -