- Advertisement -
- Advertisement -
ಎತ್ತಿನಬಂಡಿ ಮತ್ತು ತರಕಾರಿ ಸಾಗಿಸುತ್ತಿದ್ದ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟಿದ್ದು ಎತ್ತು ಸೇರಿ ನಾಲ್ವರು ಗಂಭೀರ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ನಡೆದಿದೆ.
ಮೃತಪಟ್ಟ ಮಹಿಳೆ ಸಾಲಹಳ್ಳಿ ಗ್ರಾಮದ ಯಮನವ್ಚ ಮಡ್ಡಿ(42) ಎಂದು ಗುರುತಿಸಲಾಗಿದೆ.
ಯಮನವ್ಚ ಮಡ್ಡಿ ಸೇರಿ ನಾಲ್ವರು ಎತ್ತಿನಬಂಡಿಯಲ್ಲಿ ಹೋಲಕ್ಕೆ ಜೋಳದ ರಾಶಿ ಮಾಡಲು ಹೋಗುತ್ತಿದ್ದರು. ಈ ವೇಳೆ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ಧಾರಿಯಲ್ಲಿ ಅಪಘಾತ ನಡೆದಿದೆ. ಎತ್ತಿನ ಚಕ್ರಬಂಡಿಗೆ ತರಕಾರಿ ವಾಹನ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಯಮನವ್ಚ ಮಡ್ಡಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಎತ್ತು ಸೇರಿ ನಾಲ್ವರಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ಕಡಕೋಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -