Friday, April 19, 2024
spot_imgspot_img
spot_imgspot_img

ಪ್ರತಿಸ್ಪರ್ಧಿ ವ್ಯಾಪಾರಿಗಳ ಅಂಗಡಿಗೆ ಬೆಂಕಿ ಇಟ್ಟು ಪೋಲೀಸರಿಗೆ ಅತಿಥಿಯಾದ ಭೂಪ!!

- Advertisement -G L Acharya panikkar
- Advertisement -

ರಾಮನಗರ : ರಾಜಸ್ಥಾನ ಮೂಲದ ವ್ಯಾಪಾರಿಯೊಬ್ಬ ತನ್ನ ಇಬ್ಬರು ಪ್ರತಿಸ್ಪರ್ಧಿ ವ್ಯಾಪಾರಿಗಳ ಅಂಗಡಿಗೆ ಬೆಂಕಿಯಿಟ್ಟು, ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ರಾಮನಗರ ಜಿಲ್ಲೆಯ ಆರೋಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಜಿಲ್ಲೆಯ ಆರೋಹಳ್ಳಿ ಪಟ್ಟಣದ ಮಹದೇವ್ ಆಟೋಮೊಬೈಲ್ ಮಳಿಗೆ ಹೊಂದಿರುವ ರಾಜಸ್ತಾನ ಮೂಲದ ಮುಕೇಶ್ ಕುಮಾರ್ ಎಂಬಾತ, ಪಟ್ಟಣದಲ್ಲಿನ ಕೃಷ್ಣಾ ಆಟೋಮೊಬೈಲ್ ಮತ್ತು ಮಹಾಲಕ್ಷ್ಮಿ ಆಟೋಮೊಬೈಲ್ ಎರಡು ಅಂಗಡಿಗಳಿಗೆ ಬೆಂಕಿಯಿಟ್ಟು ಸುಮಾರು 43 ಲಕ್ಷ ರೊಪಾಯಿ ನಷ್ಟ ಮಾಡಿರುವ ಆರೋಪದ ಮೇಲೆ ಆರೋಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಇದೇ ತಿಂಗಳ ಡಿ.10 ರಂದು ಕೃಷ್ಣಾ ಆಟೋಮೊಬೈಲ್ ಅಂಗಡಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟುಹೋದ ಘಟನೆಯ ಹಿನ್ನಲೆಯಲ್ಲಿ ಮಾಲೀಕ ರಘುವೀರ್ ಸಿಂಗ್ ದೂರು ನೀಡಿದ್ದಾರೆ

ಆ ದೂರಿನ ಮೇಲೆ ಮಹದೇವ್ ಆಟೋಮೊಬೈಲ್ ಅಂಗಡಿ ಮಾಲೀಕ ಮುಕೇಶ್ ಎಂಬಾತನ್ನು ವಿಚಾರಣೆ ನಡೆಸಿದಾಗ , ಪಟ್ಟಣದ ಕೃಷ್ಣಾ ಮತ್ತು ಕಳೆದ ವರ್ಷ ಮಹಾಲಕ್ಷ್ಮಿ ಆಟೋಮೊಬೈಲ್ ಅಂಗಡಿಗೆ ಬೆಂಕಿ ಹಚ್ಚಿರುವುದಾಗಿ ತಪ್ಪು

ಒಪ್ಪಿಕೊಂಡಿದ್ದಾನೆ.

ಮುಕೇಶ ಕುಮಾರ್ ನು ಕೃಷ್ಣಾ ಆಟೋಮೊಬೈಲ್ ಅಂಗಡಿಯಿಂದ ನನ್ನ ವ್ಯಾಪಾರ ಕಡಿಮೆಯಾಗಿದೆ ಎಂಬ ದ್ವೇಷದಿಂದಾಗಿ, ರಾಜಸ್ಥಾನ ಮೂಲದ ಗೆಳೆಯ ಝಾಕೀರ್, ಬಲವೀರ್ ಸಿಂಗ್ ಹಾಗೂ ಸ್ನೇಹಿತರಿಗೆ ಹಣ ನೀಡಿ ಎರಡು ಅಂಗಡಿಗಳಿಗೆ ಬೆಂಕಿ ಹಾಕಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿಗಳಾದ ಮುಕೇಶ್ ಕುಮಾರ್, ಝಾಕೀರ್ ಮತ್ತು ಬಲವೀರ್ ಸಿಂಗ್ ರನ್ನು ಪೊಲೀಸರು

ಬಂಧಿಸಿ ಜೈಲಿಗಟ್ಟಿದ್ದಾರೆ.

- Advertisement -

Related news

error: Content is protected !!