





ಶ್ರೀ ಶಾರದಾಂಭ ಭಜನಾ ಮಂದಿರದ ವಾರದ ಭಜನಾ ಕಾರ್ಯಕ್ರಮದಲ್ಲಿ ಇಂದು ದೇಶವನ್ನು ಕಾಯುವ ಸೈನಿಕರ ಶ್ರೇಯಸ್ಸಿಗೆ ವಿಶೇಷ ಪ್ರಾರ್ಥನೆ ಕಾರ್ಯಕ್ರಮ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಕಮಾಂಡರ್ ಕ್ಯಾಪ್ಟನ್ ದಾಸಪ್ಪ ಪೂಜಾರಿ ಹಾಗೂ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಆರತಿ ಯಾವುದು.


ಕಾರ್ಯಕ್ರಮದಲ್ಲಿ ಸಮಿತಿಯ ಗೌರವ ಸಲಹೆಗಾರರಾದ ಶ್ರೀ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು ಪ್ರಸ್ತಾವಿಕ ಮಾತಿನಲ್ಲಿ ಒಬ್ಬ ಯೋಧನು ತನ್ನ ಪ್ರಾಣ ತ್ಯಜಿಸಿದರು ಅವನ ಆತ್ಮ ಸದಾ ಕಾಲ ಭಾರತದ ಭೂಮಿಯಲ್ಲಿ ತ್ರೀವರ್ಣ ಧ್ವಜದ ಅಡಿಯಲ್ಲಿ ಜೀವಂತವಾಗಿರುತ್ತದೆ ನಮಗಾಗಿ ತಮ್ಮ ಕುಟುಂಬವನ್ನು ತ್ಯಜಿಸಿ ದೇಶ ಕಾಯುವ ಪ್ರತಿಯೊಬ್ಬ ಸೈನಿಕನನ್ನು ಗೌರವಿಸಬೇಕು ಅವರ ಶ್ರೇಯಸ್ಸಿಗೆ ಮಾಡುವ ಭಜನಾ ಸೇವೆ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಹಾರೈಸಿದರು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಕಮಾಂಡರ್ ದೇಜಪ್ಪ ಪೂಜಾರಿಯವರು ಮಾತನಾಡಿ ಸಿಂಹ ಹೃದಯ ಕಠಿಣ ಶಿಸ್ತು, ಅಸಾಧ್ಯ ಮನುಷ್ಯತ್ವ , ದೇಶ ಪ್ರೇಮ ಇದನ್ನು ಒಪ್ಪಿಕೊಳ್ಳುವ ಸಾಮರ್ಥ್ಯವಿದ್ದರೆ ಮಾತ್ರ ಯೋಧನಾಗಬೇಕಂಬ ಕನಸು ನಿಜವಾಗುವುದು ಸೈನಿಕನಾಗುವುದೆಂದರೆ ವೇಷದಾರನಿಯ ವಿಷಯವಲ್ಲ ಅದು ಬಲಿದಾನಕ್ಕೂ ಸಿದ್ದರಾಗಿರುವುದೆಂದು ಎಂಬರ್ಥ ಯುವಕರು ದೇಶ ಸೇವೆಗೆ ಸದಾ ಸಿದ್ದರಾಗಿ ಈ ಭೂಮಿಯನ್ನು ರಕ್ಷಿಸುಸುವುದೆ ಒಂದು ಪುಣ್ಯದ ಕೆಲಸ ದೇಶ ಸೇವೆಗೆ ಯಾವುದೆ ಜಾತಿ ಇಲ್ಲ ಅಲ್ಲಿ ಕಾಣುವುದು ಮನುಷ್ಯ ಜಾತಿ ಒಂದೇ ಸೈನಿಕರಿಗೆ ಎಲ್ಲಾ ದೇವಾಲಯ ಈ ಮಾತೃ ಭೂಮಿ ಅದನ್ನು ಕಾಪಾಡುವ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು .ಈ ಕಾರ್ಯಕ್ರಮದ ಮತ್ತೋರ್ವ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಆರತಿ ಅವರು ಮಾತನಾಡಿ ನಮ್ಮ ಸಂಸ್ಕೃತಿ, ನಮ್ಮ ಆಚಾರ ವಿಚಾರಗಳನ್ನು ಉಳಿಸುವುದೆ ಇಂತಹ ಭಜನಾ ಮಂದಿರಗಳಲ್ಲಿ ಇಂದು ದೇಶ ಕಾಯುವ ಯೋಧರ ಶ್ರೆಯೋಭಿವೃದ್ದಿಗೆ ಭಜನಾ ಸೇವೆ ಮಾಡಿದ್ದೀರಿ ಇದು ಒಂದು ಮಾದರಿ ಕಾರ್ಯಕ್ರಮವಾಗಿದೆ ಇಂತಹ ಕಾರ್ಯಕ್ರಮ ಮಾಡಿ ಮುಂದಿನ ಮಕ್ಕಳಿಗೆ ದೇಶ ಸೇವೆ ಮಾಡಲು ನಾವು ಪ್ರೇರಣೆ ನೀಡಬೇಕು ಎಂದು ಹೇಳಿದರು. ನಿವೃತ್ತ ಯೋಧರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಭಜನಾ ಮಂಡಳಿಯ ಅದ್ಯಕ್ಷರಾದ ಶ್ರೀ ಕೃಷ್ಣ ಕಿಶೋರ್ ಭಟ್ ಸ್ವಾಗತಿಸಿ, ವಂದನಾರ್ಪಣೆ ಭಜನಾ ಮಂಡಳಿಯ ಉಪಾದ್ಯಕ್ಷರಾದ ಉದಯ್ ಕುಲಾಲ್ ನಡೆಸಿ ಸುಧೀರ್ ನಾಯ್ಕ್ ಕೆಮನಾಜೆ ಮತ್ತು ಭಾಸ್ಕರ್ ರೈ ಕಾರ್ಯಕ್ರಮ ನಿರ್ವಹಿಸಿದರು ,ಈ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.