

ಸ್ನಾತಕೋತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಸಂತ ಫಿಲೋಮಿನ(ಸ್ವಾಯತ)ಕಾಲೇಜು ಪುತ್ತೂರು ದ. ಕ (ನ್ಯಾಕ್ ಮಾನ್ಯತೆ ಎ) ಸಮಾಜ ಕಾರ್ಯ ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೋಡಿಂಬಾಡಿ ಗ್ರಾಮ ಪಂಚಾಯತ್ ವನಿತಾ ಸಮಾಜ ಸಂಘ ಇವರ ಜಂಟಿ ಆಶ್ರಯದಲ್ಲಿ ಗ್ರಾಮೀಣ ಮಹಿಳೆಯರಿಗೆ ಶುಚಿ ನನ್ನ ಮೈತ್ರಿ ಆರೋಗ್ಯ ಕಾರ್ಯಕ್ರಮವು ಮಾರ್ಚ್ 28 ರಂದು ಕೋಡಿಂಬಾಡಿ ಭಜನಾ ಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ಣಿಮಾ S. ಶೆಟ್ಟಿ, ವನಿತಾ ಸಮಾಜ ಸಂಘದ ಗೌರವಧ್ಯಕ್ಷರು ವಹಿಸಿಕೊಂಡರು. ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸುಶ್ಮಿತಾ ಪುತ್ತೂರು, ತಾಲ್ಲೂಕು ಆಸ್ಪತ್ರೆಯ counsellor, ವನಿತಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ರಶ್ಮಿ ನಿರಂಜನ್ ರೈ, ಕಾರ್ಯದರ್ಶಿಯಾದ ಪವಿತ್ರ ಸುರೇಶ್ ಶೆಟ್ಟಿ, ಉಪಾಧ್ಯಕ್ಷರದ ರಾಧಿಕಾ R ಸಮಂತ್ ರವರು ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದರು. ಅಧ್ಯಕ್ಷತೆಯನ್ನು ವಹಿಸಿಕೊಂಡ ಪೂರ್ಣಿಮಾ S. ಶೆಟ್ಟಿಯವರು ಕಾರ್ಯಾಕ್ರಮವನ್ನು ಉದ್ಗಟಿಸಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ್ಳಿಗೆ ಆರೋಗ್ಯ ಕಾರ್ಯಕ್ರಮವನ್ನು ನಡೆಸುವುದು ಅನುಕೂಲಕವಾದದ್ದು ಎಂದು ತಮ್ಮ ಅನಿಸಿಕೆಯನ್ನು ಹೇಳಿದರು.ಕಾರ್ಯಕ್ರಮಕೆ ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿದ ಶ್ರೀಮತಿ ಸುಶ್ಮಿತಾ ಪುತ್ತೂರು ತಾಲ್ಲೂಕು ಆಸ್ಪತ್ರೆಯ counsellor ಇವರು ಮಹಿಳೆಯಾರಿಗೆ ಆರೋಗ್ಯದ ಬಗ್ಗೆ ವಿಷಯವನ್ನು ಹೇಳಿದರು. ಮುಟ್ಟಿ ನ ಸಂದರ್ಭದಲ್ಲಿ ಹೆಣ್ಣು ಅನುಭವಿಸುವ ತೊಂದರೆಗಳು, ಹಾಗೂ ಅದಕ್ಕೆ ಪರಿಯರೋಪಯಗಳು,ಸ್ತನದ ಕ್ಯಾನ್ಸರ್ ನ ಲಕ್ಷ್ಮಣಗಳು ಹೆಣ್ಣು ಮಕ್ಕಳು ಎದುರಿಸುವ ಎಲ್ಲಾ ಆರೋಗ್ಯ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮವನ್ನು ಸಂತ ಫಿಲೋಮಿನಾ(ಸ್ವಾಯತ)ಕಾಲೇಜು ಸಮಾಜ ಕಾರ್ಯ ವಿಭಾಗ ವಿದ್ಯಾರ್ಥಿನಿಯರಾದ ತೇಜಸ್ವಿನಿ B. L ಹಾಗೂ ವೈಷ್ಣವಿ ಅವರು ನಿರೂಪಿಸಿದರು. ಮಹಮ್ಮದ್ ಆಶೀರ್ ವಂದಿಸಿದರು.