ವಿಟ್ಲ: ವಿಷ್ಣುಮೂರ್ತಿ ಯುವಕವೃಂದ (ರಿ) ವಿಷ್ಣುನಗರ ಕುಂಡಡ್ಕ ಇದರ 11ನೇ ವರ್ಷದ ವಾರ್ಷಿಕೋತ್ಸವ ತಾ-09-03-2024 ನೇ ಶನಿವಾರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆಯಲ್ಲಿ ನಡೆಯಿತು.
ಬೆಳಗ್ಗೆ ವಿಷ್ಣುಮೂರ್ತಿ ಯುವಕವೃಂದ ದ ನೂತನ ಕಛೇರಿಯ ಉದ್ಘಾಟನೆಯನ್ನು ಕೃಷ್ಣಪ್ಪ ಗುರುಸ್ವಾಮಿ ಪಾಂಡೇಲು ನೆರವೇರಿಸಿದರು. ಈ ಸಂದರ್ಭ ಇಡ್ಕಿದು ಸೇವಾ ಸಹಕಾರಿ ಸಂಘ ದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು, ಇಡ್ಕಿದು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಪದ್ಮನಾಭ ಕೊಡಂಚರಪಾಲು, ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಮರುವಾಳ, ಕಾರ್ಯದರ್ಶಿ ಹರೀಶ್ ಮರುವಾಳ,ಕೋಶಾಧಿಕಾರಿ ಜಿನ್ನಪ್ಪ ಗೌಡ ಗಾಳಿಗುಡ್ಡೆ, ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಕಟ್ನಾಜೆ, ಯುವಕವೃಂದದ ಅಧ್ಯಕ್ಷರಾದ ಮನೋಜ್ ಕಂಪ, ಉಪಾಧ್ಯಕ್ಷರಾದ ನವೀನ್ ಹಡೀಲು, ಕಾರ್ಯದರ್ಶಿ ಗಿರೀಶ್ ಹಡೀಲು ಹಾಗೂ ಯುವಕವೃಂದದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಂಜೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ವಿಷ್ಣುಮೂರ್ತಿ ದೇವರಿಗೆ ಶ್ರೀ ರಂಗಪೂಜೆ ನಡೆಯಿತು.ನಂತರ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ಯುವಕವೃಂದದ ಅಧ್ಯಕ್ಷರಾದ ಮನೋಜ್ ಕಂಪ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ವೇಣುಗೋಪಾಲ ಶೆಟ್ಟಿ ಮರುವಾಳ, ತಾರಾನಾಥ ಬೊಳಿಗದ್ದೆ ಉಪಸ್ಥಿತರಿದ್ದರು.ಧಾರ್ಮಿಕ ಭಾಷಣ ಶಿವಪ್ರಸಾದ್ ಮಲೆಬೆಟ್ಟು ಮಾಡಿದರು.ಶ್ರೀ ಈಶ್ವರ ಕುಲಾಲ್ ಎಣ್ಣೆದಕಲ ಕೃಷಿ ಕ್ಷೇತ್ರ , ಶೇಖರ ಪರವ ಮತ್ತು ಲಕ್ಷ್ಮಣ ಪರವ ಎರ್ಮೆನಿಲೆ ದೈವನರ್ತಕರು ಇವರಿಗೆ ಸನ್ಮಾನ ನಂತರ ಸಾರ್ವಜನಿಕ ಅನ್ನಪ್ರಸಾದ ನಡೆಯಿತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಲಲತೆ ಕಲಾವಿದರು ಮಂಗಳೂರು ಇವರಿಂದ ಗರುಡ ಪಂಚಮಿ ನಾಟಕ ಪ್ರದರ್ಶನ ನಡೆಯಿತು.