Saturday, June 28, 2025
spot_imgspot_img
spot_imgspot_img

ಪುತ್ತೂರು: ಬಸ್ ನಿಲ್ದಾಣದ ಬಳಿ ಎರಡು ತಂಡಗಳ ನಡುವೆ ಹೊಡೆದಾಟ..!

- Advertisement -
- Advertisement -

ಪುತ್ತೂರು :ಎರಡು ತಂಡಗಳ ನಡುವೆ ನಡುರಸ್ತೆಯಲ್ಲೇ ಹೊಡೆದಾಟ ನಡೆಸಿಕೊಂಡ ಘಟನೆ ಪುತ್ತೂರಿನ ಬಸ್ ನಿಲ್ದಾಣ ಸಮೀಪದಲ್ಲಿ ನಡೆದಿದೆ.

ಪುತ್ತೂರು ಬಸ್ ನಿಲ್ದಾಣ ಸಮೀಪದ ಗಾಂಧಿಕಟ್ಟೆ ಸಮೀಪ ಹಣ್ಣು ಹಂಪಲು ವಿತರಣೆಯ ಪಿಕಪ್ ವಾಹನದವರು ಮತ್ತು ಮಾರುತಿ 800 ಕಾರಿನ ನಡುವೆ ರಾತ್ರಿ 8.45 ಸಮಯಕ್ಕೆ ಮುಖ್ಯ ಪೇಟೆಯಲ್ಲೇ ನಡುರಸ್ತೆಯಲ್ಲೇ ಹೊಡೆದಾಟ ನಡೆದಿದೆ. ಯಾವಾ ಕಾರಣಕ್ಕೆ ಈ ಹೊಡೆದಾಟ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಎರಡೂ ಬಣಗಳು ಒಂದೇ ಕೋಮಿಗೆ ಸೇರಿದ್ದಾಗಿದೆ. ಹೊಡೆದಾಟ ನಡುರಸ್ತೆಯವರೆಗೂ ತಲುಪಿದಾಗ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಆಗಿದೆ. ನಂತರ ಸ್ಥಳೀಯ ಅಂಗಡಿಯವರು ಬಂದು ಎಚ್ಚರಿಕೆ ಕೊಟ್ಟ ನಂತರ ಎರಡು ತಂಡಗಳು ಜಾಗ ಖಾಲಿ ಮಾಡಿವೆ.

- Advertisement -

Related news

error: Content is protected !!