




ಪುತ್ತೂರು: ಆಟೋ ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದ ಮಹಿಳೆಗೆ ಪರಿಚಿತ ಆಟೋ ಚಾಲಕನೊಬ್ಬ ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಒಡ್ಡಿದ ಘಟನೆ ಈಶ್ವರಮಂಗಲ ಸಮೀಪದ ಮೇನಾಲ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವ ಬೆದರಿಕೆ ಒಡ್ಡಿದ ಆಟೋ ಚಾಲಕ ಬಡಗನ್ನೂರು ಗ್ರಾಮದ ಮುಸ್ತಾಫ ಕುಕ್ಕಾಜೆ ಎಂದು ಗುರುತಿಸಲಾಗಿದೆ. ಈಶ್ವರಮಂಗಲದ ನೆಟ್ಟಣಿಗೆ ಮುಡೂರು ಗ್ರಾಮ ರುಬಿನಾ (32) ದೂರುದಾರೆ
ಡಿ.5 ರಂದು ರುಬಿನಾರವರು ಈಶ್ವರಮಂಗಲಕ್ಕೆ ಹೋಗಿದ್ದು. ಪರಿಚಯದ ಜಮಾಲ್ ಎಂಬವರ ಆಟೋರಿಕ್ಷಾದಲ್ಲಿ ಸಂಜೆ ವಾಪಸ್ಸು ಮನೆಗೆ ಬರುತ್ತಿದ್ದ ವೇಳೆ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಇವರು ಹೋಗುತ್ತಿದ್ದ ಆಟೋ ರಿಕ್ಷಾವನ್ನು ಆರೋಪಿಯು ಮೇನಾಲ ಎಂಬಲ್ಲಿ ತನ್ನ ರಿಕ್ಷಾವನ್ನು ಅಡ್ಡವಿಟ್ಟು ತಡೆದಿದ್ದಾನೆ.
ಬಳಿಕ ಆರೋಪಿ ಮುಸ್ತಾಫನು ರುಬಿನಾರಿಗೆ ಅವ್ಯಾಚವಾಗಿ ಬೈದು. ಜೀವಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನಂತೆ ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಬಿಎನ್ ಎಸ್ ಕಲಂ: 126(2),352 351(3)ರಂತೆ ಪ್ರಕರಣ ದಾಖಲಾಗಿದೆ.