Sunday, June 29, 2025
spot_imgspot_img
spot_imgspot_img

ಪುತ್ತೂರು ಕೋ. ಅಪರೇಟಿವ್ ಟೌನ್ ಬ್ಯಾಂಕ್ ಅವ್ಯವಹಾರ ಮತ್ತು ಆಡಳಿತಾತ್ಮಕ ಲೋಪಗಳ ಬಗ್ಗೆ RBI ಗೆ ದೂರು. ವಿಚಾರಣೆಗೆ ಮುಂದಾದ ಸಹಕಾರ ಇಲಾಖೆ : ಬ್ಯಾಂಕ್ ಸದಸ್ಯ ಸುದರ್ಶನ್ ಪುತ್ತೂರು ಗಂಭೀರ ಆರೋಪ

- Advertisement -
- Advertisement -

ಪುತ್ತೂರು : ಪುತ್ತೂರನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಾಚರಿಸುತ್ತಿರುವ ಕೋ. ಅಪರೇಟಿವ್ ಟೌನ್ ಬ್ಯಾಂಕ್ ನ ಕಾರ್ಯಚಟುವಟಿಕೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಬ್ಯಾಂಕ್ ನ ಸದಸ್ಯ ಮತ್ತು ಆರ್.ಟಿ.ಐ ಕಾರ್ಯಕರ್ತ ಸುದರ್ಶನ್ ಪುತ್ತೂರು ಆರೋಪಿಸಿದ್ದಾರೆ.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ‌ ಅವರು 115 ವರ್ಷ ಇತಿಹಾಸವುಲ್ಲ ಪುತ್ತೂರು ಕೋ. ಅಪರೇಟಿವ್ ಟೌನ್ ಬ್ಯಾಂಕ್ ನಲ್ಲಿ ಕಳೆದ ನಾಲೈದು ವರ್ಷಗಳಲ್ಲಿ ಅವ್ಯವಹಾರ ಮತ್ತು ಆಡಳಿತಾತ್ಮಕ ಲೋಪಗಳ ಬಗ್ಗೆ ಪ್ರತಿ ವರ್ಷ ಮಹಾಸಭೆಯಲ್ಲಿ ಪ್ರಶ್ನಿಸಲಾಗಿದ್ದು ಸಂಬಂಧಪಟ್ಟ ಆಡಳಿತ ಮಂಡಳಿ ಮತ್ತು ಬ್ಯಾಂಕ್ ನ ಮುಖ್ಯಾಧಿಕಾರಿಗಳು ಸಮರ್ಪಕ ವಿವರಣೆಗಳನ್ನು ನೀಡಲು ಮುಂದಾಗುತ್ತಿರಲಿಲ್ಲ.

ದಿನಾಂಕ 4.8.2024ರಂದು ನಡೆದ ಮಹಾ ಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಪುಡಿ ರೌಡಿ ಸ್ವಭಾವದ ಎರಡು ಮೂರು ಜನ ಸಭೆಯಲ್ಲಿಯೇ ಕೈ ಎತ್ತಿ ಹಲ್ಲೆಗೆ ಮುಂದಾಗಿದ್ದು ಆಡಳಿತ ಮಂಡಳಿ ನಿಯಂತ್ರಣ ಕ್ಕೆ ಮುಂದಾಗದೆ ಹೆಬ್ಬೆರಳು ತಂಬ್ ತೋರಿಸಿ ಖುಷಿ ಪಟ್ಟಿದ್ದರು. ಮಹಾಸಭೆಗೆ ಮೂರು ನಾಲ್ಕು ದಿನ ಇರುವಾಗಲೇ ಒಂದಷ್ಟು ಸದಸ್ಯರನ್ನು ಕರೆದು ಮಾತುಕತೆ ನಡೆಸಿ ಆಡಳಿತ ಮಂಡಳಿ ಸಿದ್ಧತೆ ನಡೆಸಿದ್ದರು ಎಂಬುದಕ್ಕೆ ಆಡಳಿತ ಕಚೇರಿ ಸಿ. ಸಿ. ಕ್ಯಾಮರಾ ಫೂಟೆಜ್ ಸಾಕ್ಷಿ ನೀಡಬಲ್ಲುದು.

ಬ್ಯಾಂಕಿನ ಸದಸ್ಯರಿಗೆ ನೀಡುವ ಡಿವಿಡೆಂಟ್ ಹಣದಲ್ಲಿ ಏರಿಕೆಯನ್ನೇ ಮಾಡಿಲ್ಲ ಎಂದರು. ಬ್ಯಾಂಕ್ ನ ಸಿಬ್ಬಂದಿಗಳ ಆಯ್ಕೆ ಮತ್ತು ಇತರ ಆಯ್ಕೆಗಳಿಗೆ ಕೇವಲ ಸಂಘಪರಿವಾರಕ್ಕೆ ಸಂಬಂಧಪಟ್ಟವರನ್ನೇ ನಿಯೋಜಿಸಿದ್ದಾರೆ ಎಂದು ಆರೋಪಿಸಿದ ಅವರು ಸದಸ್ಯರ ಗಮನಕ್ಕೆ ತರದೆ ಬ್ಯಾಂಕ್ ನ ವ್ಯವಸ್ಥಾಪಕ ಹುದ್ದೆಯನ್ನು ತೆಗೆದು ಹಾಕಿ, ಆಡಳಿತ ಮಂಡಳಿಗೆ ಬೇಕಾಗುವ ವ್ಯಕ್ತಿಗಳನ್ನು ಲಕ್ಷಾಂತರ ರೂಪಾಯಿ ಸಂಬಳ ನೀಡಿ ನಿಯೋಜಿಸಲಾಗಿದೆ.

ವಾರ್ಷಿಕ ಮಹಾಸಭೆಯ ನೋಟಿಸಿನಲ್ಲಿ ನಮೂದಿಸಿದಂತೆ ಬ್ಯಾಂಕ್ ನ ಯಾವುದೇ ದಾಖಲೆಯನ್ನು ಪರಿಶೀಲನೆ ಮಾಡಲು ಬ್ಯಾಂಕ್ ಅಧಿಕಾರಿಯಾಗಲಿ ಆಡಳಿತ ಮಂಡಳಿಯಾಗಲಿ ಅನುಮತಿಸುತ್ತಿಲ್ಲ. ಈ ವರೆಗೆ ಐದಾರು ಬಾರಿ ನೀಡಲಾದ ದೂರಿಗೆ ಸ್ಪಂದನೆ ಇಲ್ಲದ ಕಾರಣ ಸಹಕಾರ ಸಂಘಗಳ ಜಿಲ್ಲಾ ನಿಬಂಧಕರು ತನಿಖೆಗೆ ಮುಂದಾಗಿದ್ದು 25.9.2024 ಪುತ್ತೂರು ತಾಲೂಕು ಸಹಕಾರ ಸಂಘಗಳ ಸಹಾಯಕ ನಿಭಂದಕರು 31.8.2024 ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶೇಖರ್ ಶೆಟ್ಟಿ ಹಾಗೂ ಅಧ್ಯಕ್ಷ ಕಿಶೋರ್ ಕೊಳತ್ತಾಯರನ್ನು ಸುದರ್ಶನ್ ಪುತ್ತೂರುರವರ ಉಪಸ್ಥಿತಿಯಲ್ಲಿ ದೂರುಗಳನ್ನು ಖಚಿತ ಪಡಿಸಿಕೊಂಡು 25.9.2024 ದೂರುಗಳಿಗೆ ಸಂಭದ ಪಟ್ಟ ದಾಖಲೆ ಮತ್ತು ಹೇಳಿಕೆಗಳನ್ನು ನೀಡಲು ನೋಟೀಸ್ ಮೂಲಕ ಸೂಚನೆ ನೀಡಿದ್ದಾರೆ.

ಈ ಮದ್ಯೆ ಬ್ಯಾಂಕಿಗೆ ಸಂಬಂದ ಪಟ್ಟವರು ದೂರವಾಣಿ ಕರೆಗಳನ್ನು ಮಾಡಿ ಬೆದರಿಕೆ ಒಡ್ಡಿದ ಕಾರಣಕ್ಕೆ ಪುತ್ತೂರು ಪೊಲೀಸ್‌ಠಾಣೆಗೆ ದೂರು ನೀಡಿದ್ದಕ್ಕಾಗಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶೇಖರ್ ಶೆಟ್ಟಿ ಹಾಗೂ ಅಧ್ಯಕ್ಷ ಕಿಶೋರ್ ಕೊಳತ್ತಾಯರ ಮುಚ್ಚಳಿಕೆ ಪಡೆದು ಪುತ್ತೂರು ಕೋ. ಆಪರೇಟಿವ್ ಬ್ಯಾಂಕಿಗೆ ಸಂಬಂಧಪಟ್ಟ ಯಾವುದೇ ಬೆದರಿಕೆ, ಹಲ್ಲೆಗೆ ಇವರೇ ಹೊಣೆಗಾರರೆಂದು ಭದ್ರತೆಯ ಹಿಂಬರಹ ಪಡೆದುಕೊಳ್ಳಲಾಗಿದೆ.

ಈ ಎಲ್ಲಾ ಕಾರಣಗಳಿಗೆ RBI ಗೆ ಎರಡು ಬಾರಿ ದೂರು ನೀಡಲಾಗಿದ್ದು ಸಂಬಂದ ಪಟ್ಟ RBI ಇಲಾಖೆ ತನಿಖೆ ಮಾಡಲು ನಿರ್ದೇಶಸಿರುವ ಹಿಂಬರಹ ಇಮೇಲ್ ದಿನಾಂಕ 2.9.2024 ರಲ್ಲಿ RBI ಸುದರ್ಶನ್ ಪುತ್ತೂರು ರವರಿಗೆ ರವಾನಿಸಿರುತ್ತಾರೆ . ಹಣಕಾಸು ವ್ಯವಹಾರಕ್ಕೆ ಸಂಭಂದಿಸಿದ ಹತ್ತು ಹಲವು ದೂರುಗಳು ಆಡಳಿತ ಮಂಡಳಿಯ ಅವ್ಯವಹಾರ ಶಂಕೆಯನ್ನು ವ್ಯಕ್ತಪಡಿಸಿದೆ ಎಂದರು. .

- Advertisement -

Related news

error: Content is protected !!